ಕರ್ನಾಟಕ

karnataka

ETV Bharat / state

ಕಾರ್ಮಿಕ ಇಲಾಖೆಯಿಂದ ಚಮ್ಮಾರನಿಗೆ ಸಿಕ್ತು ನೆರವು: ಇದು ಈಟಿವಿ ಭಾರತ Impact - tumkuru latest news updates

ಲಾಕ್​​ಡೌನ್​​ ಹಿನ್ನೆಲೆ ಊಟವಿಲ್ಲದೆ ಪರಿತಪಿಸುತ್ತಿದ್ದ ಚಮ್ಮಾರನಿಗೆ ತುಮಕೂರು ಜಿಲ್ಲಾಡಳಿತ ಆಹಾರ ಒದಗಿಸಿದೆ.

etv bharat impact in tumkuru during lockdown
ಈಟಿವಿ ಭಾರತ ಫಲಶೃತಿ

By

Published : Apr 30, 2020, 8:25 PM IST

ತುಮಕೂರು: ಲಾಕ್​​ಡೌನ್​​ ಹಿನ್ನೆಲೆ ಚಮ್ಮಾರ ಕುಟುಂಬದ ನೋವಿನ ಪರಿಸ್ಥಿತಿಯನ್ನು ಬಿತ್ತರಿಸಿದ್ದ ‘ಈಟಿವಿ ಭಾರತ್’ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಇರುವ ಚಮ್ಮಾರ ಮಂಜುನಾಥ್ ಅನೇಕ ದಿನಗಳಿಂದ ವ್ಯಾಪಾರವಿಲ್ಲದೆ ತುತ್ತು ಅನ್ನಕ್ಕೂ ಸಂಕಷ್ಟ ಅನುಭವಿಸುತ್ತಿದ್ದರು. ಅಲ್ಲದೆ ದಾನಿಗಳಿಂದ ಆಹಾರವನ್ನು ಪಡೆದು ಬದುಕು ನಡೆಸುತ್ತಿರುವುದಾಗಿ ಈಟಿವಿ ಭಾರತದೊಂದಿಗೆ ಸಮಸ್ಯೆ ಹೇಳಿಕೊಂಡಿದ್ದರು.

ಇದನ್ನು ಓದಿ:ಚಮ್ಮಾರರಿಗೂ ಕಂಟಕವಾದ ಮಹಾಮಾರಿ ಕೊರೊನಾ... ಬದುಕು ಕಷ್ಟ ಸ್ವಾಮಿ ಅಂತವ್ರೆ ಬಡಪಾಯಿಗಳು

ಚಮ್ಮಾರ ಮಂಜುನಾಥ್‌ ಅವರಿಗೆ ಧಾರ್ಮಿಕ ಇಲಾಖೆ ವತಿಯಿಂದ ಇಂದು ಆಹಾರ ಧಾನ್ಯ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಶಿವಣ್ಣ, ಕಾರ್ಮಿಕ ಇಲಾಖೆ ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details