ತುಮಕೂರು:ಜಿಲ್ಲೆಯಲ್ಲಿ ಲಾಕ್ಡೌನ್ ಹಿನ್ನೆಲೆ ಆಹಾರಕ್ಕಾಗಿ ಪರಿತಪಿಸುತ್ತಿರೋ ನಿರ್ಗತಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ನಿರ್ಗತಿಕರಿಗೆ ತುಮಕೂರು ಪೊಲೀಸರಿಂದ ಆಹಾರ ಪದಾರ್ಥ ವಿತರಣೆ - ತುಮಕೂರು ಪೊಲೀಸ್
ತುಮಕೂರಿನಲ್ಲಿ ಲಾಕ್ಡೌನ್ ಹಿನ್ನೆಲೆ ಆಹಾರಕ್ಕಾಗಿ ಪರದಾಡುತ್ತಿರುವ ನಿರ್ಗತಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನೇತೃತ್ವದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
![ನಿರ್ಗತಿಕರಿಗೆ ತುಮಕೂರು ಪೊಲೀಸರಿಂದ ಆಹಾರ ಪದಾರ್ಥ ವಿತರಣೆ Distribution of food items by Tumkur police for the needy](https://etvbharatimages.akamaized.net/etvbharat/prod-images/768-512-11749300-thumbnail-3x2-vis.jpg)
ನಿರ್ಗತಿಕರಿಗೆ ತುಮಕೂರು ಪೊಲೀಸರಿಂದ ಆಹಾರ ಪದಾರ್ಥ ವಿತರಣೆ
ನಗರದ ಸದಾಶಿವ ನಗರ, ಟೂಡಾ ಲೇ ಔಟ್, ರೋಟಿ ಘರ್, ಬಟವಾಡಿ, ಅಮಲಾಪುರ ಪ್ರದೇಶದಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸಹಾಯ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ನೇತೃತ್ವ ವಹಿಸಿದ್ದರು.