ಕರ್ನಾಟಕ

karnataka

ETV Bharat / state

ಶಾಸಕ ಜ್ಯೋತಿ ಗಣೇಶ್ ಕಚೇರಿಯಲ್ಲಿ ಸಿಎಂ ಪರಿಹಾರ ನಿಧಿ ಚೆಕ್​ ವಿತರಣೆ - ಮುಖ್ಯಮಂತ್ರಿಗಳ ಪರಿಹಾರ ನಿಧಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಂದಂತಹ ಚೆಕ್​​ಗಳನ್ನು ಇಂದು ಶಾಸಕ ಜ್ಯೋತಿ ಗಣೇಶ್ ಅವರ ಕಚೇರಿಯಲ್ಲಿ ವಿತರಿಸಲಾಯಿತು.

Distribution of compensation fund
ಜ್ಯೋತಿ ಗಣೇಶ್ ಕಚೇರಿಯಲ್ಲಿ ಪರಿಹಾರ ನಿಧಿ ಚೆಕ್​ ವಿತರಣೆ

By

Published : Jan 16, 2020, 1:59 PM IST

ತುಮಕೂರು:ಶಾಸಕ ಜ್ಯೋತಿ ಗಣೇಶ್ ಅವರ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಂದಂತಹ ಚೆಕ್​​ಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ, ಮಾತನಾಡಿದ ಶಾಸಕ ಜ್ಯೋತಿಗಣೇಶ್, ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರ ಪರಿಹಾರ ನಿಧಿಯಿಂದ ಹತ್ತು ಕುಟುಂಬದವರಿಗೆ 8,50,000 ರೂ.ನಷ್ಟು ಹಣವನ್ನು ನೀಡಲಾಗಿದೆ. ಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರಿಗೆ, ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಂತವರಿಗೆ ಇಂದು ಪರಿಹಾರದ ಚೆಕ್​​ನನ್ನು ವಿತರಣೆ ಮಾಡಲಾಗಿದೆ.

ಜ್ಯೋತಿ ಗಣೇಶ್ ಕಚೇರಿಯಲ್ಲಿ ಪರಿಹಾರ ನಿಧಿ ಚೆಕ್​ ವಿತರಣೆ

ಬಡ ಮತ್ತು ಮಧ್ಯಮ ವರ್ಗದವರು ಅನಾರೋಗ್ಯಕ್ಕೆ ತುತ್ತಾದಾಗ ಚಿಕಿತ್ಸೆ ಪಡೆದುಕೊಳ್ಳಲು ಆಗದಂತಹ ಪರಿಸ್ಥಿತಿಯಲ್ಲಿರುವವರಿಗೆ ಸಿಎಂ ಅವರ ಪರಿಹಾರ ನಿಧಿಯಿಂದ ಹಣ ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿಯೂ ಇಂತಹ ಸಮಸ್ಯೆ ಇರುವವರು ಬಿಪಿಎಲ್ ಕಾರ್ಡ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಲ ದಾಖಲೆಗಳನ್ನು ಶಾಸಕರ ಕಚೇರಿಗೆ ತಲುಪಿಸಿದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಒದಗಿಸಲಾಗುವುದು ಎಂದರು.

ABOUT THE AUTHOR

...view details