ಕರ್ನಾಟಕ

karnataka

ETV Bharat / state

ವಿಚ್ಛೇದನ ಬಯಸಿ ಕೋರ್ಟ್​ ಮೆಟ್ಟಿಲೇರಿದ್ದ ದಂಪತಿ ಮತ್ತೆ ಒಂದಾದರು - Couple reunited in tumakuru court

ವಿಚ್ಛೇದನ ಬಯಸಿದ್ದ ದಂಪತಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಹೂಮಾಲೆ ಬದಲಿಸಿಕೊಂಡು ಜೊತೆಗೂಡಿ ಬಾಳುವ ವಾಗ್ದಾನ ಮಾಡಿದ್ದಾರೆ.

couple-who-wanted-a-divorce-reunited-in-court
ವಿಚ್ಛೇದನ ಬಯಸಿ ಕೋರ್ಟ್​ ಮೆಟ್ಟಿಲೇರಿದ್ದ ದಂಪತಿ ಮತ್ತೆ ಒಂದಾದರು

By

Published : Jun 24, 2022, 8:10 PM IST

ತುಮಕೂರು:ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಮತ್ತೆ ಒಂದಾಗಿದ್ದಾರೆ. ಚಿಕ್ಕನಾಯಕನಹಳ್ಳಿ ಜೆಎಂಎಫ್​ಸಿ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಪತಿ, ಪತ್ನಿ ಪುನಃ ಒಟ್ಟಿಗೆ ಬಾಳುವ ನಿರ್ಧಾರ ಕೈಗೊಂಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಬೈಲಪ್ಪನ ಮಠ ಗ್ರಾಮದ ದೀಪಕ್ ಹಾಗೂ ಬೆಂಗಳೂರು ಮೂಲದ ಲಕ್ಷ್ಮಿದೇವಿ ಎಂಬುವರೆ ಪರಸ್ಪರ ಭಿನ್ನಾಭಿಪ್ರಾಯ ಬದಿಗೊತ್ತಿ ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ಮುಂದಾದವರು. ಸದ್ಯ ಈ ದಂಪತಿಗೆ ಒಂದು ಮಗು ಕೂಡ ಇದೆ.

ಮತ್ತೆ ಒಂದಾದ ದಂಪತಿ

ಬೆಂಗಳೂರಿನಲ್ಲೇ ವಾಸವಿದ್ದವರು ಮನಸ್ತಾಪದಿಂದ ಕಳೆದ ವರ್ಷ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಧ್ಯಸ್ಥಿಕೆ ಮೂಲಕ ಇಬ್ಬರ ಮನವೊಲಿಸುವ ಪ್ರಯತ್ನ ನಡೆದಿತ್ತು. ಕೊನೆಗೂ ದಂಪತಿ ಒಟ್ಟಿಗೆ ಬದುಕಲು ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಹೂಮಾಲೆ ಬದಲಿಸಿಕೊಂಡು ಜೊತೆಗೂಡಿ ಬದುಕುವ ವಾಗ್ದಾನ ಮಾಡಿರುವ ದಂಪತಿ, ತಮ್ಮ ಮಗುವಿನೊಂದಿಗೆ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ

For All Latest Updates

ABOUT THE AUTHOR

...view details