ತುಮಕೂರು:ಸಿಎಂ ಯಡಿಯೂರಪ್ಪ ಹೇಳುವಂತೆ 15 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಪ್ರಜಾಪ್ರಭುತ್ವದಲ್ಲಿ ನೂರಕ್ಕೆ ನೂರು ಬರಲು ಸಾಧ್ಯವಿಲ್ಲ. 13 ಸ್ಥಾನ ಖಚಿತವಾಗಿ ಬಿಜೆಪಿ ಗೆಲ್ಲುತ್ತದೆ. ಆ ಮೂಲಕ ಸರ್ಕಾರ ಇನ್ನೂ ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಸಂಸದ ಜಿ ಎಸ್ ಬಸವರಾಜು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವತ್ವದಲ್ಲಿ ನೂರಕ್ಕೆ ನೂರು ಗೆಲ್ಲಲು ಸಾಧ್ಯವಿಲ್ಲ.. ಸಂಸದ ಜಿ ಎಸ್ ಬಸವರಾಜು - ಕರ್ನಾಟಕ ಉಪಚುನಾವಣೆ ಸುದ್ದಿ
ರಾಜ್ಯದ 15 ಕ್ಷೇತ್ರದ ಉಪಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಸಂಸದ ಜಿ ಎಸ್ ಬಸವರಾಜು ಹೇಳಿದರು. ಅಭಿನಂದನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.
![ಪ್ರಜಾಪ್ರಭುತ್ವತ್ವದಲ್ಲಿ ನೂರಕ್ಕೆ ನೂರು ಗೆಲ್ಲಲು ಸಾಧ್ಯವಿಲ್ಲ.. ಸಂಸದ ಜಿ ಎಸ್ ಬಸವರಾಜು](https://etvbharatimages.akamaized.net/etvbharat/prod-images/768-512-5162688-thumbnail-3x2-tmk.jpg)
ಸಂಸದ ಜಿ.ಎಸ್.ಬಸವರಾಜು
ಸಂಸದ ಜಿ ಎಸ್ ಬಸವರಾಜು..
ನಗರದ ಕನ್ನಡ ಭವನದಲ್ಲಿ ಸಂಸದ ಜಿ ಎಸ್ ಬಸವರಾಜು ಅವರಿಗೆ ಜಿಲ್ಲಾ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನೇ ನಿಮಗೆ ಸನ್ಮಾನ ಮಾಡಬೇಕು. ರಾಕ್ಷಸರ ವಿರುದ್ಧ ನಿಲ್ಲಿಸಿ, ಗೆಲ್ಲಿಸಿದ್ದೀರಿ, ನಾನು ನಿಮ್ಮ ಋಣ ತೀರಿಸಬೇಕಿದೆ ಎಂದರು.
ಕಾಂಗ್ರೆಸ್ ಮೂರು ಗುಂಪಾಗಿದೆ. ಅದಕ್ಕೆ ಗೆಲುವು ಸಾಧ್ಯವಿಲ್ಲ. ಜೆಡಿಎಸ್ 3ರಿಂದ 4 ಕ್ಷೇತ್ರದಲ್ಲಿ ಪೈಪೋಟಿ ನೀಡಲಿದೆ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರವಿದೆ ಎಂದು ಹೇಳಿದರು. ಚಿಕ್ಕತೊಟ್ಲು ಕೆರೆಯ ಅಟವಿ ಜಂಗಮ ಕ್ಷೇತ್ರದ ಪೀಠಾಧ್ಯಕ್ಷ ಅಟವಿ ಶಿವಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.