ಕರ್ನಾಟಕ

karnataka

ETV Bharat / state

ಬುದ್ಧಿವಾದ ಹೇಳಿದ್ದೇ ತಪ್ಪಾ?:  ಮಾಜಿ ಉಪಮೇಯರ್ ಮೇಲೆ ಮಚ್ಚಿನಿಂದ ಹಲ್ಲೆ - ತುಮಕೂರಿನಲ್ಲಿ ಯುವಕನಿಂದ ವ್ಯಕ್ತ ಮೇಲೆ ಹಲ್ಲೆ

ಬುದ್ದಿವಾದ ಹೇಳಿದಕ್ಕೆ ಯುವಕನೋರ್ವ ತುಮಕೂರಿನ ಮಾಜಿ ಉಪಮೇಯರ್​ ಮೇಲೆ ಹಲ್ಲೆ ನಡೆಸಿದ್ದಾನೆ.

assault on former deputy mayor of Thumkur
ಹಲ್ಲೆಗೊಳಗಾದ ವೆಂಕಟೇಶ್​

By

Published : Sep 25, 2020, 3:58 PM IST

ತುಮಕೂರು :ಗಾಂಜಾ ಸೇವಿಸಿ ಅಶ್ಲೀಲವಾಗಿ ಮಾತನಾಡುತ್ತಾ ಪುಂಡಾಟಿಕೆ ಮಾಡುತ್ತಿದ್ದ ಯುವಕನಿಗೆ ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ. ಇದೇ ಕಾರಣಕ್ಕೆ ಮಾಜಿ ಉಪಮೇಯರ್ ವೆಂಕಟೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಮೇಳೆಕೋಟೆ ಬಡಾವಣೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವೆಂಕಟೇಶ್​

ಮಚ್ಚೇಟಿನಿಂದ ತಲೆಗೆ ಗಂಭೀರ ಗಾಯವಾಗಿ ನರಳುತ್ತಿದ್ದ ವೆಂಕಟೇಶ್ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆ ನಡೆಸಿದ ಆರೋಪಿ ಸಯ್ಯದ್ ಖಾಜಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details