ತುಮಕೂರು:ತುಮಕೂರಿನ ಎರಡನೇ ವಾರ್ಡ್ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಸ್ತೆ ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದೆ.
ಕೆಸರು ಗದ್ದೆಯಂತಾದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆ - antharasanahalli Agricultural Product Market
ತುಮಕೂರಿನ ಎರಡನೇ ವಾರ್ಡ್ಗೆ ಸೇರುವ ಅಂತರಸನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಸ್ತೆ ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದೆ
ಕೆಸರು ಗದ್ದೆಯಂತಾದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆ
ನಗರ ಪ್ರದೇಶದಿಂದ ಹೊರಗಿರುವ ಈ ಮಾರುಕಟ್ಟೆ ಅಧಿಕಾರಿಗಳ ದಿವ್ಯನಿರ್ಲಕ್ಷದಿಂದ ಅನೈರ್ಮಲ್ಯಕ್ಕೆ ಒಳಗಾಗಿದೆ. ಕೆಲದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬಿದ್ದ ಮಳೆನೀರು ಬೇರೆಡೆ ಹೋಗಲು ಸಾಧ್ಯವಾಗದೆ, ನಿಂತಲ್ಲೇ ನಿಂತು ಕೆಸರುಗದ್ದೆಯಂತಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪ್ರತಿದಿನ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.
ಈ ಕೆಸರಿನಂದಾಗಿ ಸರಿಯಾಗಿ ವ್ಯಾಪಾರವಾಗದೇ, ತರಕಾರಿಗಳು ಕೊಳೆಯುವಂತೆ ಪರಿಸ್ಥಿತಿ ಉಂಟಾಗಿದೆ ಎಂದು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.