ಕರ್ನಾಟಕ

karnataka

ETV Bharat / state

ನೀರಿನಲ್ಲಿ ಕೊಚ್ಚಿ ಹೋಗಿ ಮರವೇರಿದ್ದ ಕೃಷಿ ಅಧಿಕಾರಿಯ ರಕ್ಷಿಸಿದ ಗ್ರಾಮಸ್ಥರು - officer was washed away in the water

ಗುಡಿಬಂಡೆ ಗ್ರಾಮದಿಂದ ಸಿಕೆಪುರ ಮಾರ್ಗವಾಗಿ ಆಂಧ್ರದ ರಾಮಗಿರಿಯ ಎನ್​ಹೆಚ್ ಗೇಟ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದ ಕೃಷಿ ಅಧಿಕಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

agricultural officer who was drowned in water at tumakuru
ನೀರಿನಲ್ಲಿ ಕೊಚ್ಚಿ ಹೋಗಿ ಮರವೇರಿದ್ದ ಕೃಷಿ ಅಧಿಕಾರಿ

By

Published : Oct 19, 2022, 7:50 PM IST

Updated : Oct 19, 2022, 8:02 PM IST

ತುಮಕೂರು:ರಭಸವಾಗಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಆಂಧ್ರಪ್ರದೇಶದ ಕೃಷಿ ಅಧಿಕಾರಿಯನ್ನು ಪಾವಗಡ ತಾಲೂಕಿನ ಸಿಕೆಪುರ ಗ್ರಾಮದ ಬಳಿ ಜನರು ರಕ್ಷಿಸಿದರು.

ಕೃಷಿ ಅಧಿಕಾರಿ ಮೋಹನ್ ನಾಯಕ ಎಂಬುವವರು ಬೈಕ್​ನಲ್ಲಿ ಗುಡಿಬಂಡೆ ಗ್ರಾಮದಿಂದ ಸಿಕೆ ಪುರ ಮಾರ್ಗವಾಗಿ ಆಂಧ್ರದ ರಾಮಗಿರಿಯ ಎನ್​ಹೆಚ್ ಗೇಟ್‌ಗೆ ತೆರಳುತ್ತಿದ್ದರಂತೆ. ಈ ವೇಳೆ ದೊಡ್ಡ ಹಳ್ಳದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅವರು ನಂತರ ಮಧ್ಯದಲ್ಲಿ ಸಿಕ್ಕ ಮರ ಹಿಡಿದು ಮರವೇರಿ ಪ್ರಾಣ ರಕ್ಷಿಸಿಕೊಂಡಿದ್ದರು. ಇವರ ಕೂಗಾಟ, ಚೀರಾಟ ಕಂಡ ಸ್ಥಳೀಯ ಗ್ರಾಮಸ್ಥರು ಸಮೀಪ ತೆರಳಿ, ಹಗ್ಗದ ಸಹಾಯದಿಂದ ಪ್ರಾಣ ಕಾಪಾಡಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋಗಿ ಮರವೇರಿದ್ದ ಕೃಷಿ ಅಧಿಕಾರಿಯ ರಕ್ಷಿಸಿದ ಗ್ರಾಮಸ್ಥರು

ಹಳ್ಳದಲ್ಲಿ ಸಿಲುಕಿದ್ದ ಬಸ್​: ಪಾವಗಡದಿಂದ ಹಿಂದೂಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ವೊಂದು ವೆಂಕಟಾಪುರ ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಸಿಲುಕಿ ಕೆಲಕಾಲ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿತ್ತು. ನಂತರ ಸ್ಥಳದಲ್ಲಿದ್ದವರು ಪ್ರಯಾಣಿಕರನ್ನು ನಿಧಾನವಾಗಿ ಇಳಿಸಿ, ಜೆಸಿಬಿ ಮೂಲಕ ಬಸ್ ಅನ್ನು ನೀರಿನಿಂದ ಹೊರತೆಗೆದರು.

ಇದನ್ನೂ ಓದಿ:ತುಮಕೂರು: ಮಳೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್​, ಸವಾರನ ರಕ್ಷಣೆ

Last Updated : Oct 19, 2022, 8:02 PM IST

ABOUT THE AUTHOR

...view details