ತುಮಕೂರು:ನಗರದ ಹನುಮಂತಪುರ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರು ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಡಾವಣೆಯ 4ನೇ ಕ್ರಾಸ್ ನಲ್ಲಿ ಶಿವು ಎಂಬುವರ ಮನೆ ಮುಂದೆ ವಾಮಾಚಾರ ನಡೆಸಲಾಗಿದ್ದು, ನೆರೆಮನೆಯ ಮಹಿಳೆವೋರ್ವಳು ಈ ಕೃತ್ಯ ಎಸಗಿದ್ದಾಳೆ. ಅಲ್ಲದೇ ಇಂದು ಬೆಳಗ್ಗೆ ಮನೆ ಮುಂದೆ ವಾಮಾಚಾರ ಮಾಡುವಾಗ ರೆಡ್ ಹ್ಯಾಂಡ್ ಆಗಿ ಮಹಿಳೆ ಸಿಕ್ಕಿಬಿದ್ದಿದ್ದಾಳೆ ಎಂದು ಶಿವು ಎಂಬುವರು ಆರೋಪಿಸಿದ್ದಾರೆ.