ಕರ್ನಾಟಕ

karnataka

ETV Bharat / state

ಕನ್ನಡಪರ ಸಂಘಟನೆಯವರೆಂದು ಹೋಟೆಲ್​​ಗೆ ನುಗ್ಗಿ ದಾಂಧಲೆ... ಕ್ಯಾಷಿಯರ್ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ - ಕ್ಯಾಷಿಯರ್ ಮೇಲೆ ಹಲ್ಲೆ

ಪುಂಡರ ಗುಂಪೊಂದು ತುಮಕೂರಿನ ಹೋಟೆಲ್​​ವೊಂದಕ್ಕೆ ನುಗ್ಗಿ ಕನ್ನಡ ಪರ ಸಂಘಟನೆ ಕಾರ್ಯಕರ್ತರೆಂದು ಹೇಳಿಕೊಂಡು ದಾಂಧಲೆ ನಡೆಸಿದ್ದು, ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆ

By

Published : Sep 3, 2019, 1:02 PM IST

ತುಮಕೂರು:ಕನ್ನಡ ಪರ ಸಂಘಟನೆ ಕಾರ್ಯಕರ್ತರೆಂದು ಹೇಳಿಕೊಂಡ ಪುಂಡರು, ನಗರದ ಹೊರವಲಯದ ಜಾಸ್ ಟೋಲ್ ಬಳಿಯ ಆನಂದ ಬಿಹಾರಿ ಹೋಟೆಲ್​ಗೆ ನುಗ್ಗಿ ದಾಂಧಲೆ ನಡೆಸಿ, ಕ್ಯಾಷಿಯರ್​​ ಮೇಲೆ ಹಲ್ಲೆ ಮಾಡಿದ್ದಾರೆ.

ಶಿವಕುಮಾರ, ರಂಗಸ್ವಾಮಿ, ರಾಜೇಶ್ ಹಾಗೂ ದಕ್ಷಿತ್ ಗೌಡ ಎಂಬುವರು ಹೋಟೆಲ್​ಗೆ ಊಟಕ್ಕೆಂದು ಹೋಗಿದ್ದಾರೆ. ಊಟ ಆದ ಬಳಿಕ ಹಿಂದಿನ ಬಾಕಿ ಹಣವನ್ನು ಕೇಳಿದ್ದಕ್ಕೆ ಕೋಪಗೊಂಡ ನಾಲ್ವರೂ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿ, ಚೇರ್​ಗಳನ್ನು ಎತ್ತಿಹಾಕಿ ದಾಂಧಲೆ ನಡೆಸಿದ್ದಾರೆ. ಇವರ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕ್ಯಾಷಿಯರ್ ಮೇಲೆ ಹಲ್ಲೆ

ಈ ಸಂಬಂಧ ನಾಲ್ವರೂ ಆರೋಪಿಗಳನ್ನ ಕ್ಯಾತಸಂದ್ರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details