ತುಮಕೂರು:ಈಗಾಗಲೇ ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಸುಮಾರು 2 ಟಿಎಂಸಿಗೂ ಅಧಿಕ ನೀರು ನಾಲೆಗಳ ಮೂಲಕ ಹರಿದು ಬಂದಿದೆ. ಹೀಗೆ ನಾಲೆಯಿಂದ ಹರಿದು ಬರುತ್ತಿರುವ ನೀರನ್ನು ತಮ್ಮ ತೋಟ, ಹೊಲ-ಗದ್ದೆಗಳಿಗೆ ಹರಿಸಿಕೊಳ್ಳಲು ರೈತರು ಮುಂದಾಗಿದ್ದಾರೆ.
ಹೇಮಾವತಿ ನಾಲೆಗಳ ಬಳಿ 144 ಸೆಕ್ಷನ್ ಜಾರಿ: ರಾತ್ರಿ ವೇಳೆ ವಿಶೇಷ ಪೊಲೀಸ್ ಗಸ್ತು - ಹೇಮಾವತಿ ಜಲಾಶಯ
ಹೇಮಾವತಿ ಜಲಾಶಯದಿಂದ 2 ಟಿಎಂಸಿಗೂ ಅಧಿಕ ನೀರು ನಾಲೆಗಳ ಮೂಲಕ ಹರಿದು ಬಂದಿದೆ. ಹೀಗಾಗಿ ಈ ನೀರನ್ನು ವ್ಯವಸ್ಥಿತವಾಗಿ ತುಮಕೂರು ಜಿಲ್ಲೆಯ ಎಲ್ಲ ಭಾಗಕ್ಕೂ ಹರಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಇನ್ನೊಂದೆಡೆ, ನಾಲೆಯ ಸಮೀಪ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
![ಹೇಮಾವತಿ ನಾಲೆಗಳ ಬಳಿ 144 ಸೆಕ್ಷನ್ ಜಾರಿ: ರಾತ್ರಿ ವೇಳೆ ವಿಶೇಷ ಪೊಲೀಸ್ ಗಸ್ತು](https://etvbharatimages.akamaized.net/etvbharat/prod-images/768-512-4376984-thumbnail-3x2-tmk.jpg)
ಇನ್ನೊಂದೆಡೆ ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ತಡೆಗಟ್ಟುವುದು ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಹರಸಾಹಸವಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೇಮಾವತಿ ಚಾನಲ್ಗಳ ಬಳಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಲೆಯ ಡಿಸ್ಟ್ರಿಬ್ಯೂಟರ್ 20 ಮತ್ತು 22 ನ ಸುತ್ತಲೂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಾಕಷ್ಟು ಪ್ರಮಾಣದಲ್ಲಿ ಹೇಮಾವತಿ ಜಲಾಶಯದಿಂದ ನೀರು ಹರಿಯುತ್ತಿದೆ. ಹೀಗಾಗಿ ಈ ನೀರನ್ನು ವ್ಯವಸ್ಥಿತವಾಗಿ ತುಮಕೂರು ಜಿಲ್ಲೆಯ ಎಲ್ಲಾ ಭಾಗಕ್ಕೂ ಹರಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ನಾಲೆಯ ಸಮೀಪ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ರಾತ್ರಿ ವೇಳೆ ಪೊಲೀಸರು ನಾಲೆಗಳ ಬಳಿ ಗಸ್ತು ತಿರುಗುತ್ತಿದ್ದಾರೆ.