ಕರ್ನಾಟಕ

karnataka

By

Published : Aug 30, 2019, 5:51 AM IST

Updated : Aug 30, 2019, 5:21 PM IST

ETV Bharat / state

ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣವೇ ನಾಪತ್ತೆ: ಪುಟ್ಟ ಕಂದಮ್ಮಗಳ ಕಣ್ಣಲ್ಲಿ ಕಣ್ಣೀರು

ಕಳೆದ ವರ್ಷ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲೆಂದು ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ, ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು. ಆದರೆ ಇದೀಗ ಆ ಹಣ ಕಾಣೆಯಾಗಿದೆ.

ಕೊಡಗು ನೆರೆ ಸಂತ್ರಸ್ತರಿಗಾಗಿ ಶಾಲಾ ಮಕ್ಕಳು ಸಂಗ್ರಹಿಸಿದ್ದ ಹಣ ನಾಪತ್ತೆ

ರಾಯಚೂರು: ಕಳೆದ ವರ್ಷ‌ ಕೊಡಗಿನಲ್ಲಿ‌ ಉಂಟಾಗಿದ್ದ ನೆರೆ ಹಾವಳಿಯಿಂದಾಗಿ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗಾಗಿ ರಾಯಚೂರಿನ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಣ ಸಂಗ್ರಹಿಸಿದ್ದರು. ಆದರೆ, ಆ ಹಣ ಸಂತ್ರಸ್ತರಿಗೆ ಸೇರದೇ ಶಾಲೆಯ ಮುಖ್ಯಗುರು ಅವರ ಜೇಬಿಗೆ ಸೇರಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ವರ್ಷ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಅನೇಕ ದಾನಿಗಳು, ಸಂಘ ಸಂಸ್ಥೆಗಳು ಮುಂದಾಗಿದ್ದರು. ಇವರ ಜೊತೆಯಲ್ಲಿ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ, ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು. ಅಂದಾಜು 50 ಸಾವಿರ ರೂ. ಸಂಗ್ರಹಿಸಿ ಮುಖ್ಯಶಿಕ್ಷಕಿ ಸರಸ್ವತಿ ಅವರ ಕೈಗೆ ನೀಡಿದ್ದಾರೆ. ಆದರೆ ಶಿಕ್ಷಕಿ ಹಣವನ್ನು ಸಂತ್ರಸ್ತರಿಗೆ ನೀಡದೆ ತಾವೇ ಬಳಸಿಕೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಕೊಡಗು ನೆರೆ ಸಂತ್ರಸ್ತರಿಗಾಗಿ ಶಾಲಾ ಮಕ್ಕಳು ಸಂಗ್ರಹಿಸಿದ್ದ ಹಣ ನಾಪತ್ತೆ

ಬೀದಿ ಬೀದಿ ಅಲೆದಾಡಿ ಪುಟ್ಟ ಕೈಗಳಿಂದ ಹಣ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ದುಃಖವಾಗಿದೆ. ಒಂದು ವೇಳೆ ಹಣ ಕಳೆದು ಹೋಗಿದ್ದರೆ ಜವಾಬ್ದಾರಿ ಹೊತ್ತ ಸರಸ್ವತಿ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಿತ್ತು ಅಥವಾಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕಿತ್ತು ಇದಾವುದನ್ನೂ ಮಾಡದ ಹಿನ್ನೆಲೆ ಶಿಕ್ಷಕಿಯೇ ಹಣ ಗುಳುಂ ಮಾಡಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.

ಈ ಕುರಿತು ಪಾಲಕರು, ಜಿ.ಪಂ. ಸಿಇಓ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

Last Updated : Aug 30, 2019, 5:21 PM IST

ABOUT THE AUTHOR

...view details