ಕರ್ನಾಟಕ

karnataka

By

Published : Jun 4, 2020, 7:31 PM IST

ETV Bharat / state

ಅಕ್ರಮವಾಗಿ ಅಡಿಕೆ ದಾಸ್ತಾನು: ಐಟಿ ದಾಳಿ, 1.10 ಕೋಟಿ ರೂ. ದಂಡ

ಶಿವಮೊಗ್ಗ, ಸಾಗರದಲ್ಲಿ ಅನಧಿಕೃತವಾಗಿ 11 ಕೋಟಿ ರೂ. ಮೌಲ್ಯದ ಅಡಿಕೆ ದಾಸ್ತಾನು ಇಟ್ಟಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, 1.10 ಕೋಟಿ ರೂ. ದಂಡ ವಿಧಿಸಿದ್ದಾರೆ.

It ride on Illegal nut shortage in shivamogga
It ride on Illegal nut shortage in shivamogga

ಬೆಂಗಳೂರು: ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ದಾಸ್ತಾನು ಇಟ್ಟಿದ್ದ ಗೋದಾಮುಗಳ ಮೇಲೆ‌ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಮೊಗ್ಗ, ಸಾಗರದಲ್ಲಿ 13 ಮಂದಿ ವರ್ತಕರ ಅನಧಿಕೃತ ಅಡಿಕೆ ದಾಸ್ತಾನು ಗೋದಾಮುಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 1.10 ಕೋಟಿ ರೂ. ದಂಡ ವಿಧಿಸಿದ್ದಾರೆ‌.

ಲಾಕ್​​ಡೌನ್ ಅವಧಿಯನ್ನೇ ಬಂಡವಾಳ ಮಾಡಿಕೊಂಡ ಕೆಲ ವರ್ತಕರು, ಹಲವು ವ್ಯಕ್ತಿಗಳಿಂದ ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಅಡಿಕೆ‌ ಖರೀದಿಸಿದ್ದರು ಎನ್ನಲಾಗಿದೆ. ಮಾಹಿತಿ ಹಿನ್ನೆಲೆ ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ನಿತೀಶ್ ಕೆ. ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ 1.10 ಕೋಟಿ ರೂ. ದಂಡ ವಿಧಿಸಲಾಗಿದೆ.

ABOUT THE AUTHOR

...view details