ಬೆಳಗಾವಿ: ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣರಾಗಿದ್ದರು. ಇದೀಗ ಈ ದಾಳವನ್ನು ಗೋಕಾಕ್ ನಗರಸಭೆ ಮೇಲೂ ಉರುಳಿಸಿ ಯಶಸ್ವಿಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ತಂತ್ರಗಾರಿಕೆ: 12 ಜನ ಕೈ ಬೆಂಬಲಿತ ಪಕ್ಷೇತರ ಸದಸ್ಯರು ಬಿಜೆಪಿಗೆ ಸೇರ್ಪಡೆ - Gokak Municipality
ಗೋಕಾಕ್ ನಗರಸಭೆಯ ಕಾಂಗ್ರೆಸ್ ಬೆಂಬಲಿತ 12 ಜನ ಪಕ್ಷೇತರ ಸದಸ್ಯರು ದಿಢೀರ್ ಬಿಜೆಪಿ ಸೇರಿದ್ದಾರೆ.
![ರಮೇಶ್ ಜಾರಕಿಹೊಳಿ ತಂತ್ರಗಾರಿಕೆ: 12 ಜನ ಕೈ ಬೆಂಬಲಿತ ಪಕ್ಷೇತರ ಸದಸ್ಯರು ಬಿಜೆಪಿಗೆ ಸೇರ್ಪಡೆ Gokak Municipality](https://etvbharatimages.akamaized.net/etvbharat/prod-images/768-512-01:10:57:1602747657-kn-bgm-03-15-operation-lotus-7201786-15102020130602-1510f-1602747362-551.jpg)
Gokak Municipality
ಗೋಕಾಕ್ ನಗರಸಭೆಯ ಕಾಂಗ್ರೆಸ್ ಬೆಂಬಲಿತ 12 ಜನ ಪಕ್ಷೇತರ ಸದಸ್ಯರು ದಿಢೀರ್ ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತವರಲ್ಲೇ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಡಿದೆ.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ತಂತ್ರಗಾರಿಕೆಯ ಪರಿಣಾಮ ಈ ಬಾರಿ ಗೋಕಾಕ್ ನಗರಸಭೆ ಬಿಜೆಪಿ ಪಾಲಾಗುವುದು ಖಚಿತವಾಗಿದೆ.