ಕರ್ನಾಟಕ

karnataka

ETV Bharat / state

ಶರತ್​ ಬಚ್ಚೇಗೌಡ ಅವಶ್ಯಕತೆ ನಮಗಿಲ್ಲ.. ಸಚಿವ ಕೆ ಎಸ್ ​ಈಶ್ವರಪ್ಪ - Latest News For K.S Eshwarappa

ಶರತ್​ ಬಚ್ಚೇಗೌಡ ಅವರ ಅವಶ್ಯಕತೆ ನಮಗೆ ಇಲ್ಲ ಎಂದು ಗ್ರಾಮೀಣಾಭೀವೃದ್ಧಿ ಹಾಗೂ ಪಂಚಾಯತ್‌ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

We Don't want Need Sharath Bachhegowda : KSE
ಶರತ್​ ಬಚ್ಚೇಗೌಡ ಅವಶ್ಯಕತೆ ನಮಗಿಲ್ಲ : ಕೆಎಸ್​ಈ

By

Published : Dec 14, 2019, 6:51 PM IST

ಶಿವಮೊಗ್ಗ: ಈಗ ನಮಗೆ ಶರತ್​ ಬಚ್ಚೇಗೌಡ ಅವರ ಅವಶ್ಯಕತೆ ಇಲ್ಲ ಎಂದು ಗ್ರಾಮೀಣಾಭೀವೃದ್ಧಿ ಹಾಗೂ ಕ್ರೀಡಾ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ಹೀಗೇಕೆ ಪರೀಕ್ಷೆ ಮಾಡ್ತಾರೋ ಗೊತ್ತಿಲ್ಲ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಮಗೆ ಕೆಲ ಸೀಟುಗಳು ಕಡಿಮೆಯಾಗಿದ್ದವು. ಆದರೆ, ಇಂದು ಅಂತಹ ಪರಿಸ್ಥಿತಿಯಿಲ್ಲ. ಹಾಗಾಗಿ ಶರತ್ ಬಚ್ಚೇಗೌಡ ಬೇಕೇ ಬೇಕು ಎಂಬುದಿಲ್ಲ. ಅಂತಹ ಪರಿಸ್ಥಿತಿ ಬಂದಾಗ ನೋಡೋಣ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ..

ಕಳೆದ ವಿಧಾನಸಭಾ ಚುನಾವಣೆ ನಡೆದಾಗ ಜನರು ಬಿಜೆಪಿಗೆ ಪೂರ್ಣ ಬಹುಮತ ನೀಡಿರಲಿಲ್ಲ. ಆದರೆ, ಬಹುಮತಕ್ಕೆ ಸಮೀಪ ತೆಗೆದುಕೊಂಡು ಹೋಗಿದ್ದರು. ಅದಕ್ಕಾಗಿ ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳಾದವು. ಕಡಿಮೆ ಕ್ಷೇತ್ರಗಳಿಗಾಗಿ ಅರ್ಧದಷ್ಟು ಕ್ಯಾಬಿನೆಟ್ ಸ್ಥಾನವನ್ನು ಮೀಸಲಿಡಬೇಕಾಯಿತು. ಬಿಜೆಪಿಯನ್ನು ಬೆಂಬಲಿಸಿ ಬಂದವರು ಇಂದು ಗೆಲುವು ಸಾಧಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೇಗೆಲ್ಲಾ ಬದಲಾಗುತ್ತೋ ಗೊತ್ತಾಗುತ್ತಲ್ಲ ಎಂದರು.

ಅಸಮಾಧಾನಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಭಿನ್ನಾಭಿಪ್ರಾಯವಿಲ್ಲ. ಸಂಘಟನೆಯಿಂದಾಗಿ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

ABOUT THE AUTHOR

...view details