ಶಿವಮೊಗ್ಗ: ಕುಮದ್ವತಿ ಉಗಮವಾಗುವ ತೀರ್ಥದ ಕೊಳದಲ್ಲಿ ಅಪ್ರಕಟಿತ ಶಿಲಾ ಶಾಸನ ಪತ್ತೆಯಾಗಿದೆ.
ಹೊಸನಗರ ತಾಲೂಕು ಜೈನರ ಪ್ರವಿತ್ರ ಕ್ಷೇತ್ರ ಹುಂಚದ ಬಳಿ ಕುಮದ್ವತಿ ನದಿ ಉಗಮವಾಗುತ್ತದೆ. ನದಿ ಉಗಮವಾಗುವ ಸ್ಥಳದಲ್ಲಿ ಕಲ್ಲಿನಲ್ಲಿ ಒಂದು ಕೊಳ ಕಟ್ಟಲಾಗಿದೆ. ಈ ಕೊಳ ಕಲ್ಲಿನ ಪುಷ್ಕರಣಿಯಾಗಿದೆ. ಇದರ ನಾಲ್ಕು ದಿಕ್ಕಿನಿಂದ ಇಳಿದು ಹತ್ತಲು ಮೆಟ್ಟಿಲುಗಳಿವೆ. ಸುಂದರ ಶಿಲ್ಪಕಲಾ ಕೆತ್ತನೆಯ ಮೆಟ್ಟಿಲು ಹಾಗೂ ಗಜ ಶಿಲ್ಪಗಳಿವೆ. ಕೊಳದ ಒಂದು ಬಾಗದಲ್ಲಿ ಮೆಟ್ಟಿಲಿನಿಂದ ಹೊರಚಾಚಿದಂತೆ ಗೋಮುಖ ಶಿಲಾ ಪ್ರನಾಳದಿಂದ ಕುಮದ್ವತಿ ನದಿಯ ನೀರು ಉಗಮವಾಗಿ ಬರುತ್ತದೆ. ಈ ಕೊಳದಿಂದ ಹೊಂಬುಜದ ಎಲ್ಲಾ ಜೈನ ಬಸದಿಗಳ ಪೂಜೆಗೆ ನೀರನ್ನು ತೆಗೆದು ಕೊಂಡು ಹೋಗಲಾಗುತ್ತದೆ.