ಶಿವಮೊಗ್ಗ: ನಕಲಿ 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿಯ ಹಳೆ ನಗರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ರಂಗಪ್ಪ ಸರ್ಕಲ್ ಬಳಿ ತರೀಕೆರೆಯ ನಿವಾಸಿ ಅರುಣ್ ಕುಮಾರ್(23) ಹಾಗೂ ಶಿವಮೊಗ್ಗದ ಹರಿಗೆಯ ನಿವಾಸಿ ಪ್ರೇಮ್ ರಾಜ್(23) ನೋಟು ಚಲಾವಣೆ ನಡೆಸಲು ಮುಂದಾದಾಗ ಸಿಕ್ಕಿಬಿದ್ದಿದ್ದಾರೆ.