ಕರ್ನಾಟಕ

karnataka

ETV Bharat / state

ಮೂವರು ಬೈಕ್​ ಕಳ್ಳತನ ಆರೋಪಿಗಳ ಬಂಧನ: 11 ಬೈಕ್​ ವಶ

ಕಳೆದ ಒಂದು ತಿಂಗಳಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧ, ತಬಾರಕ್ ಅಲಿಯಾಸ್ ತಪ್ಪಣ್ಣ (19), ಸೈಯದ್ ಸುಭಾನ್ (20) ಮತ್ತು ಜುನೈದ್ ಅಲಿಯಾಸ್ ಜಿನ್ನು (19) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

By

Published : Nov 11, 2020, 10:26 PM IST

bike stealer
bike stealer

ಶಿವಮೊಗ್ಗ: ನಗರದ ವಿವಿಧೆಡೆ ನಡೆದ ದ್ವಿಚಕ್ರ ವಾಹನಗಳ ಕಳ್ಳತನದ ಆರೋಪದಡಿ ಮೂವರನ್ನು ಬಂಧಿಸಿದ ಪೊಲೀಸರು, 11 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ತಬಾರಕ್ ಅಲಿಯಾಸ್ ತಪ್ಪಣ್ಣ (19), ಸೈಯದ್ ಸುಭಾನ್ (20) ಮತ್ತು ಜುನೈದ್ ಅಲಿಯಾಸ್ ಜಿನ್ನು (19) ಬಂಧಿತ ಆರೋಪಿಗಳು. ಕಳೆದ ಒಂದು ತಿಂಗಳಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಬಂಧಿತ ಆರೋಪಿಗಳಿಂದ 3.44 ಲಕ್ಷ ರೂ. ಮೌಲ್ಯದ 11 ಬೈಕ್ ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪಿಎಸ್ಐ ತಿರುಮಲೇಶ್ ಹಾಗೂ ಜಿ.ಆರ್​ ನಾರಾಯಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ABOUT THE AUTHOR

...view details