ಶಿವಮೊಗ್ಗ: ತಾಲೂಕಿಗೆ ನೂತನವಾಗಿ ಬಂದ ತಹಶೀಲ್ದಾರ್ ನಾಗರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬೀಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಹಶೀಲ್ದಾರ್: ಸಾಮಾಜಿಕ ಅಂತರಕ್ಕೂ ನಿರ್ಲಕ್ಷ್ಯ - k s eeshwarappa
ಶಿವಮೊಗ್ಗದ ಕೆ.ಆರ್.ಪುರಂ ಬಡಾವಣೆಯಲ್ಲಿ ದಿನಸಿ ಕಿಟ್ ವಿತರಣೆ ಮಾಡಿ ವಾಪಸ್ ಆಗುವಾಗ ತಹಶೀಲ್ದಾರ್ ನಾಗರಾಜ್ ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.
![ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಹಶೀಲ್ದಾರ್: ಸಾಮಾಜಿಕ ಅಂತರಕ್ಕೂ ನಿರ್ಲಕ್ಷ್ಯ eeshwarappa](https://etvbharatimages.akamaized.net/etvbharat/prod-images/768-512-7024368-771-7024368-1588387908037.jpg)
eeshwarappa
ತಹಶೀಲ್ದಾರ್ ನಾಗರಾಜ್ ಅವರು ಕಳೆದ ತಿಂಗಳು ಜಿಲ್ಲೆಗೆ ವರ್ಗಾವಣೆಯಾಗಿದ್ದು, ನಿನ್ನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ಈ ಹಿಂದೆ ದಾವಣಗೆರೆಯ ಚನ್ನಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಚಿವ ಈಶ್ವರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಹಶೀಲ್ದಾರ್ ನಾಗರಾಜ್
ಕೆ.ಆರ್.ಪುರಂ ಬಡಾವಣೆಯಲ್ಲಿ ದಿನಸಿ ಕಿಟ್ ವಿತರಿಸಿ ಹಿಂತಿರುಗುವಾಗ ತಹಶೀಲ್ದಾರ್ ನಾಗರಾಜ್, ಸಚಿವರ ಕಾಲಿಗೆ ಬಿದ್ದರು. ಈ ವೇಳೆ ಸಚಿವರ ಬೆಂಬಲಿಗರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದರು.