ಕರ್ನಾಟಕ

karnataka

ಸಾಗರದಲ್ಲಿ ಬಾವಿಗೆ ಬಿದ್ದಿದ್ದ ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ

By

Published : May 17, 2020, 8:03 PM IST

ಬಾವಿಯೊಂದಕ್ಕೆ ಬಿದ್ದಿದ್ದ ಹಾವನ್ನು ನೋಡಿದ ಸಾಗರ ಪಟ್ಟಣದ ವಿಜಯನಗರ ನಿವಾಸಿಗಳು ಉರಗತಜ್ಞ ಪ್ರಮೋದ್ ಎಂಬುವವರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪ್ರಮೋದ್ ಹಾವನ್ನು ಸುರಕ್ಷಿತವಾಗಿ ಮೇಲೆ ತೆಗೆದು ಕಾಡಿಗೆ ಬಿಟ್ಟಿದ್ದಾರೆ.

snake-rescue
ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗತಜ್ಞ

ಶಿವಮೊಗ್ಗ:ಸಾಗರ ಪಟ್ಟಣದ ವಿಜಯನಗರದ ಮನೆಯೊಂದರ ಹಿಂಭಾಗದ ರಿಂಗ್ ಬಾವಿಯಲ್ಲಿ ಬಿದ್ದಿದ್ದ ನಾಗರಹಾವೊಂದನ್ನು ಉರಗತಜ್ಞ ಪ್ರಮೋದ್ ಸುರಕ್ಷಿತವಾಗಿ ಮೇಲಕ್ಕೆ ತಂದು ಬಿಟ್ಟಿದ್ದಾರೆ.

ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗತಜ್ಞ

ಬಾವಿಯಲ್ಲಿ ಬಿದ್ದಿದ್ದ ಹಾವನ್ನು ಕಂಡ ಸ್ಥಳೀಯರು ಭಯಗೊಂಡು ಉರಗರಕ್ಷಕ ಪ್ರಮೋದ್​ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪ್ರಮೋದ್, ಬಾವಿಗಿಳಿದು ಹಾವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ನಂತರ ಹಾವನ್ನು ಸಾಗರ ಸಮೀಪದ ವರದಹಳ್ಳಿ ಬಳಿಯ ಕಾಡಿಗೆ ಬಿಟ್ಟು ಬಂದಿದ್ದಾರೆ.

ABOUT THE AUTHOR

...view details