ಶಿವಮೊಗ್ಗ:ಸಾಗರ ಪಟ್ಟಣದ ವಿಜಯನಗರದ ಮನೆಯೊಂದರ ಹಿಂಭಾಗದ ರಿಂಗ್ ಬಾವಿಯಲ್ಲಿ ಬಿದ್ದಿದ್ದ ನಾಗರಹಾವೊಂದನ್ನು ಉರಗತಜ್ಞ ಪ್ರಮೋದ್ ಸುರಕ್ಷಿತವಾಗಿ ಮೇಲಕ್ಕೆ ತಂದು ಬಿಟ್ಟಿದ್ದಾರೆ.
ಸಾಗರದಲ್ಲಿ ಬಾವಿಗೆ ಬಿದ್ದಿದ್ದ ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ
ಬಾವಿಯೊಂದಕ್ಕೆ ಬಿದ್ದಿದ್ದ ಹಾವನ್ನು ನೋಡಿದ ಸಾಗರ ಪಟ್ಟಣದ ವಿಜಯನಗರ ನಿವಾಸಿಗಳು ಉರಗತಜ್ಞ ಪ್ರಮೋದ್ ಎಂಬುವವರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪ್ರಮೋದ್ ಹಾವನ್ನು ಸುರಕ್ಷಿತವಾಗಿ ಮೇಲೆ ತೆಗೆದು ಕಾಡಿಗೆ ಬಿಟ್ಟಿದ್ದಾರೆ.
ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗತಜ್ಞ
ಬಾವಿಯಲ್ಲಿ ಬಿದ್ದಿದ್ದ ಹಾವನ್ನು ಕಂಡ ಸ್ಥಳೀಯರು ಭಯಗೊಂಡು ಉರಗರಕ್ಷಕ ಪ್ರಮೋದ್ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪ್ರಮೋದ್, ಬಾವಿಗಿಳಿದು ಹಾವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ನಂತರ ಹಾವನ್ನು ಸಾಗರ ಸಮೀಪದ ವರದಹಳ್ಳಿ ಬಳಿಯ ಕಾಡಿಗೆ ಬಿಟ್ಟು ಬಂದಿದ್ದಾರೆ.