ಕರ್ನಾಟಕ

karnataka

ಶಿವಮೊಗ್ಗದಲ್ಲಿ ಮಳೆಯನ್ನೂ ಲೆಕ್ಕಿಸದೇ 'ಕುರುಕ್ಷೇತ್ರ' ಚಿತ್ರ ನೋಡಿದ ಡಿಬಾಸ್​ ಅಭಿಮಾನಿಗಳು

By

Published : Aug 9, 2019, 12:41 PM IST

ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ ಅಭಿಮಾನಿಗಳು ದರ್ಶನ್ ಅಭಿನಯದ 50ನೇ ಸಿನಿಮಾಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸುವ ಮೂಲಕ ಶುಭ ಹಾರೈಸಿದ್ದಾರೆ.

ಕುರುಕ್ಷೇತ್ರ

ಶಿವಮೊಗ್ಗ :ಮಲೆನಾಡಿನಲ್ಲಿ ಮಳೆಯ ಆರ್ಭಟದ ಮಧ್ಯೆ ಕುರುಕ್ಷೇತ್ರದ ಬಿರುಗಾಳಿಯೂ ಜೋರಾಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಕುರುಕ್ಷೇತ್ರ ಚಿತ್ರ ಶಿವಮೊಗ್ಗದ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ದಿನದ ಎಲ್ಲಾ ಷೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಕುಣಿದು ಕುಪ್ಪಳಿಸುತ್ತಿರುವ ಡಿ ಬಾಸ್​ ಅಭಿಮಾನಿಗಳು

ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ ಅಭಿಮಾನಿಗಳು ದರ್ಶನ್ ಅಭಿನಯದ 50ನೇ ಸಿನಿಮಾಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸುವ ಮೂಲಕ ಶುಭ ಹಾರೈಸಿದ್ದಾರೆ.

ಅದ್ಭುತ ತಾರಾಗಣ, 3ಡಿ ಎಫೆಕ್ಟ್​ ಹೀಗೆ ನಾನಾ ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾ, ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿದೆ. ಅಲ್ಲದೇ ಕುರುಕ್ಷೇತ್ರ ಚಿತ್ರವನ್ನು 3 ಡಿಯಲ್ಲಿ ಸವಿಯುವ ಅವಕಾಶ ಸಿಕ್ಕಿರುವುದು ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ.

ABOUT THE AUTHOR

...view details