ಕರ್ನಾಟಕ

karnataka

By

Published : Aug 17, 2022, 8:37 PM IST

ETV Bharat / state

ಸಾವರ್ಕರ್ ಭಾವಚಿತ್ರ ವಿವಾದ: ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ

ಸ್ವಾತಂತ್ರ್ಯ ದಿನಾಚರಣೆ ದಿನ ಶಿವಮೊಗ್ಗ ನಗರದ ಎ ಎ ಸರ್ಕಲ್​ನಲ್ಲಿ ಹಾಕಲಾದ ಸಾವರ್ಕರ್ ಭಾವಚಿತ್ರ ಎರಡು ಕೋಮಿನ ನಡುವಿನ ಗಲಾಟೆಗೆ ಕಾರಣವಾಗಿತ್ತು.

ಶಿವಮೊಗ್ಗ
ಶಿವಮೊಗ್ಗ

ಶಿವಮೊಗ್ಗ: ಸಾವರ್ಕರ್ ಭಾವಚಿತ್ರ ವಿವಾದದಿಂದ ಉಂಟಾದ ಗಲಭೆಯಿಂದಾಗಿ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಶಿವಮೊಗ್ಗ ನಗರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಸ್ವಾತಂತ್ರ್ಯ ದಿನ ನಗರದ ಎಎ ಸರ್ಕಲ್​ನಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ ಕಾರಣಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಓರ್ವನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಆ. 18 ರ ರಾತ್ರಿ 10 ಗಂಟೆಯವರೆಗೆ ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಇದರಿಂದಾಗಿ ಅಂಗಡಿಗಳು ಬಂದ್​ ಆಗಿದ್ದವು.

ಸಹಜಸ್ಥಿತಿಯತ್ತ ಮರಳಿದ ಶಿವಮೊಗ್ಗ

ನಿನ್ನೆಯಿಂದ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇಂದು ಬೆಳಗ್ಗೆಯಿಂದ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರ, ಶಾಲಾ-ಕಾಲೇಜುಗಳು ಪುನಾರಂಭಗೊಂಡಿವೆ. ಅಂಗಡಿ- ಮುಂಗಟ್ಟುಗಳು ಸಹ ತೆರೆದಿವೆ. ಇಂದೂ ಸಹ ಬೈಕ್ ಹಿಂಬದಿಯ ಸವಾರರಿಗೆ ನಿರ್ಬಂಧ ಹೇರಲಾಗಿದೆ. ನಾಲ್ಕು ವರ್ಷ ಮೇಲ್ಪಟ್ಟ ಹಾಗೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ನಗರದಾದ್ಯಂತ ಪೊಲೀಸರು ವಾಹನ ತಪಾಸಣೆ‌ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸಂಸದೀಯ ಮಂಡಳಿಯಲ್ಲಿ ಬಿಎಸ್​ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ

ABOUT THE AUTHOR

...view details