ಕರ್ನಾಟಕ

karnataka

By

Published : Sep 30, 2020, 7:16 PM IST

ETV Bharat / state

ವೈಲ್ಡ್​​ ಲೈಫ್​​ ಫೋಟೋಗ್ರಫಿಯಲ್ಲಿ ಶಿವಮೊಗ್ಗ ನಾಗರಾಜ್ ಮುಡಿಗೆ ಚಿನ್ನ, ಬೆಳ್ಳಿ ಪ್ರಶಸ್ತಿ ​​​​!!

180 ದೇಶಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಹಾಗೂ ಪ್ರಶಸ್ತಿ ಲಬಿಸಿದ್ದು ಸಂತಸ ತಂದಿದೆ. ಹಾಗೇಯೆ ಈ ಹಿಂದೆ ಅಮೆರಿಕಾದ ನ್ಯೂಯಾರ್ಕ್​​​​​ನಲ್ಲೂ ಸಹ 5 ಛಾಯಾಚಿತ್ರಗಳು ಪ್ರದರ್ಶನ ಗೊಂಡಿದ್ದವು ಎಂದು ಶಿವಮೊಗ್ಗ ನಾಗರಾಜ್ ಸಂತಸ ಹಂಚಿಕೊಂಡಿದ್ದಾರೆ..

Shivamogga Nagaraj
ಶಿವಮೊಗ್ಗ ನಾಗರಾಜ್​​​​

ಶಿವಮೊಗ್ಗ :ದೆಹಲಿಯ ಪ್ರತಿಷ್ಠಿತ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಸಾಮ್ ಸರ್ಕೀಟ್-2020 ಛಾಯಾಚಿತ್ರ ಸ್ಪರ್ಧೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಚಿನ್ನ, ಬೆಳ್ಳಿ ಪದಕ ದೊರೆತಿವೆ.

ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ಸೆರಂಡರ್ ಚಿತ್ರಕ್ಕೆ, ಅಮೆರಿಕಾದ ಫೋಟೋಗ್ರಫಿ ಸೊಸೈಟಿಯ ಚಿನ್ನದ ಪದಕ (ಪಿಎಸ್‌ಎ), ವೈಲ್ಡ್ ಲೈಪ್ ಫೋಟೋಗ್ರಫಿ ಸೊಸೈಟಿ ಅಫ್ ಇಂಡಿಯಾದ ಬೆಳ್ಳಿ ಪದಕ ಹಾಗೂ ಫೋಟೋ ಟ್ರಾವೆಲ್ ವಿಭಾಗದಲ್ಲಿ ಸರ್ಟಿಫಿಕೇಟ್ ಆಫ್ ಮೆರಿಟ್ ಲಭಿಸಿದೆ.

ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿ ಪಡೆದಿದ್ದಾರೆ.

ವೈಲ್ಡ್​​ ಲೈಫ್​​ ಫೋಟೋಗ್ರಫಿಯಲ್ಲಿ ಚಿನ್ನ, ಬೆಳ್ಳಿ ಪ್ರಶಸ್ತಿ ಪಡೆದ ಪತ್ರಿಕಾ ಛಾಯಾಗ್ರಾಹಕ ನಾಗರಾಜ್​

ಶಾಲಾ-ಕಾಲೇಜುಗಳಲ್ಲಿ ಮತ್ತು ಶಿವಮೊಗ್ಗದ ಕರ್ನಾಟಕ ಸಂಘ, ಕುವೆಂಪು ರಂಗಮಂದಿರ ಸೇರಿ ವಿವಿಧೆಡೆ ವನ್ಯಜೀವಿ, ಪರಿಸರ ಹಾಗೂ ಗ್ರಾಮೀಣ ಬದುಕು, ಜನಜೀವನ ಸೇರಿ ಅನೇಕ ಬಗೆಯ ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದಾರೆ.

ಶಿವಮೊಗ್ಗ ನಾಗರಾಜ್​​​​ಗೆ ಬಂದಿರುವ ಪ್ರಶಸ್ತಿ

180 ದೇಶಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಹಾಗೂ ಪ್ರಶಸ್ತಿ ಲಬಿಸಿದ್ದು ಸಂತಸ ತಂದಿದೆ. ಹಾಗೇಯೆ ಈ ಹಿಂದೆ ಅಮೆರಿಕಾದ ನ್ಯೂಯಾರ್ಕ್​​​​​ನಲ್ಲೂ ಸಹ 5 ಛಾಯಾಚಿತ್ರಗಳು ಪ್ರದರ್ಶನ ಗೊಂಡಿದ್ದವು ಎಂದು ಶಿವಮೊಗ್ಗ ನಾಗರಾಜ್ ಸಂತಸ ಹಂಚಿಕೊಂಡಿದ್ದಾರೆ.

ಶಿವಮೊಗ್ಗ ನಾಗರಾಜ್​​​​ಗೆ ಬಂದಿರುವ ಪ್ರಶಸ್ತಿ

ABOUT THE AUTHOR

...view details