ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಕಾಲೇಜಿಗೆ ಕೇಸರಿ ಶಾಲು - ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು - ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು

ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಿಜಾಬ್ ಜಿಂದಾಬಾದ್ ಎಂದು ಕೂಗಿದರೆ, ಹಿಂದು ಯುವಕರು ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಘೋಷಣೆ ಕೂಗಿದರು. ಕಾಲೇಜಿನಿಂದ ಹೊರಬಂದ ಮುಸ್ಲಿಂ ವಿದ್ಯಾರ್ಥಿಗಳು ಮಹಾವೀರ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು
ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು

By

Published : Feb 7, 2022, 6:39 PM IST

Updated : Feb 7, 2022, 7:56 PM IST

ಶಿವಮೊಗ್ಗ :ರಾಜ್ಯಾದ್ಯಂತ ಕೇಸರಿ, ವರ್ಸಸ್ ಹಿಜಾಬ್ ನಡುವೆ ಬಿಗ್ ಫೈಟ್ ಆರಂಭಗೊಂಡಿದೆ‌‌. ಇಂದು ಬೆಳಗ್ಗೆ ನಗರದ ಸಹ್ಯಾದ್ರಿ ಕಾಲೇಜ್​​ನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದರೆ, ಮಧ್ಯಾಹ್ನದ ಹೊತ್ತಿಗೆ ಎಟಿಎನ್​ಸಿ ಕಾಲೇಜಿನಲ್ಲಿ ಹುಡುಗರು ದಿಢೀರ್ ಆಗಿ ಶಾಲು ಧರಿಸಿಕೊಂಡು ಬಂದು ಜೈ ಶ್ರೀರಾಮ್ ಹಾಗೂ ಹಿಂದೂ ಹಿಂದೂ ನಾವೆಲ್ಲಾ ‌ಒಂದು ಎಂಬ ಘೋಷಣೆ ಕೂಗಿದ್ದಾರೆ.

ಕಾಲೇಜಿನಲ್ಲಿ ಮಧ್ಯಾಹ್ನದ ಊಟದ ವೇಳೆಯ ವರೆಗೆ ತಣ್ಣಗಿದ್ದ ಕಾಲೇಜಿನಲ್ಲಿ ದಿಢೀರನೇ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಹಿಂದೂ ಪರ ಘೋಷಣೆ‌ ಕೂಗಿದರು.‌ ಇತ್ತ ಮುಸ್ಲಿಂ ವಿದ್ಯಾರ್ಥಿಗಳು ಬೇಕೇ ಬೇಕು ಬುರ್ಖಾ ಬೇಕು ಎಂದು ಘೋಷಣೆ ಕೂಗಿದರು.

ಸಹ್ಯಾದ್ರಿ ಕಾಲೇಜ್​​ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ನಂತರ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಕಾಲೇಜಿಗೆ ಸಮವಸ್ತ್ರ ಮಾತ್ರ ಧರಿಸಿಕೊಂಡು ಬರಬೇಕು. ಇಲ್ಲ ಎಂದರೆ ತರಗತಿಗೆ ಬಿಡುವುದಿಲ್ಲವೆಂದು ಸೂಚಿಸಿದರು. ಕಾಲೇಜಿನ ಕ್ಯಾಂಪಸ್​​ನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಪರಿಣಾಮ, ಸ್ಥಳದಲ್ಲಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಕೋಟೆ ಪಿಐ ಚಂದ್ರಶೇಖರ್ ದೊಡ್ಡಪೇಟೆ ಪೊಲೀಸ್ ಠಾಣೆಯ ಹರೀಶ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನು ಓದಿ:'ಅವ್ರು ಶಾಲು ಹಾಕಿ ಬಂದ್ರೇ ಪ್ರಾಬ್ಲಂ ಇಲ್ಲ.. ನಾವಂತೂ ಹಿಜಾಬ್‌ ಹಾಕಿಕೊಂಡೇ ಕಾಲೇಜಿಗೆ ಬರ್ತೇವೆ..'

ಕೊನೆಯಲ್ಲಿ ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಿಜಾಬ್ ಜಿಂದಾಬಾದ್ ಎಂದು ಕೂಗಿದರೆ, ಹಿಂದು ಯುವಕರು ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಘೋಷಣೆ ಕೂಗಿದರು. ಕಾಲೇಜಿನಿಂದ ಹೊರಬದ್ದ ಮುಸ್ಲಿಂ ವಿದ್ಯಾರ್ಥಿಗಳು ಮಹಾವೀರ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜಿನ‌ ಕ್ಯಾಂಪಸ್​​ನಲ್ಲಿ ಪ್ರತಿಭಟನೆಗೆ ಅವಕಾಶ ಇದೆ ವಿನಃ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ ಹಿನ್ನಲೆಯಲ್ಲಿ ಸ್ವಲ್ಪ ಹೊತ್ತು ದರ್ಗಾದ ಬಳಿ ಸಭೆ ಸೇರಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಪೊಲೀಸ್​ ಭದ್ರತೆ

ಬಿಗಿ ಭದ್ರತೆ:ಅಲ್ಲದೆ,ಮುಸ್ಲಿಂ ಹಾಗೂ ಹಿಂದೂ ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ನಗರದ ಕೋರ್ಟ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಡಿಎಆರ್ ಪೊಲೀಸರು, ಕೆಎಸ್​ಆರ್​​ಪಿ ಬೆಟಾಲಿಯನ್ ಹಾಗೂ ಜಯನಗರ ಪೊಲೀಸರು ಜಮಾಯಿಸಿದ್ದಾರೆ.

Last Updated : Feb 7, 2022, 7:56 PM IST

For All Latest Updates

ABOUT THE AUTHOR

...view details