ಶಿವಮೊಗ್ಗ:ಮೀನು ಸಾಗಣಿಕೆ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾಗರದ ಚೂರಿಕಟ್ಟೆ ಬಳಿ ನಡೆದಿದೆ.
ಬೈಕ್ಗೆ ಮೀನು ಸಾಗಣೆ ಲಾರಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು - Lorry bike accident
ಮೀನು ಸಾಗಣೆ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸಾಗರದ ಚೂರಿಕಟ್ಟೆ ಬಳಿ ನಡೆದಿದೆ
![ಬೈಕ್ಗೆ ಮೀನು ಸಾಗಣೆ ಲಾರಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು](https://etvbharatimages.akamaized.net/etvbharat/prod-images/768-512-4360522-thumbnail-3x2-hrs.jpg)
ಬೈಕ್ ಸವಾರಿಬ್ಬರು ಸ್ಥಳದಲ್ಲೆ ಸಾವು
ಸಿದ್ದಾಪುರ ತಾಲೂಕು ಹೊಸೂರು ಗ್ರಾಮದ ಸಂದೀಪ್ (22) ಹಾಗೂ ವಿನಾಯಕ (25) ಮೃತ ದುರ್ದೈವಿಗಳು. ಮೃತ ದೇಹಗಳನ್ನು ಸಾಗರಕ್ಕೆ ರವಾನೆ ಮಾಡಲಾಗಿದೆ.
ಲಾರಿ ಹಾಗೂ ಬೈಕ್ ಸವಾರರ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನೆ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.