ಶಿವಮೊಗ್ಗ:ಸಾಲಬಾಧೆಯಿಂದ ಹೋಟೆಲ್ ಮಾಲೀಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ.
ಸಾಲಬಾಧೆ: ತನ್ನದೇ ಹೋಟಲ್ನಲ್ಲಿ ನೇಣಿಗೆ ಶರಣಾದ ವ್ಯಕ್ತಿ - ಸಾಲ ಬಾಧೆಯಿಂದ ಹೋಟೆಲ್ ಮಾಲೀಕ ನೇಣು
ಶಿವಮೊಗ್ಗದಲ್ಲಿ ಸಾಲಬಾಧೆ ತಾಳಲಾರದೆ ವ್ಯಕ್ತಿಯೋರ್ವ ತನ್ನದೇ ಹೋಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
![ಸಾಲಬಾಧೆ: ತನ್ನದೇ ಹೋಟಲ್ನಲ್ಲಿ ನೇಣಿಗೆ ಶರಣಾದ ವ್ಯಕ್ತಿ ನೇಣಿಗೆ ಶರಣಾದ ವ್ಯಕ್ತಿ](https://etvbharatimages.akamaized.net/etvbharat/prod-images/768-512-5325066-thumbnail-3x2-yugt.jpg)
ನೇಣಿಗೆ ಶರಣಾದ ವ್ಯಕ್ತಿ
ರವಿಕುಮಾರ್ (32) ಹೋಟೆಲ್ ನಡೆಸುತ್ತಿದ್ದ. ಸಾಲಬಾಧೆ ತಾಳಲಾರದೆ ತನ್ನದೇ ಹೋಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಅವಿವಾಹಿತ. ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಜೋಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.