ಕರ್ನಾಟಕ

karnataka

By

Published : May 2, 2020, 11:09 AM IST

ETV Bharat / state

ಶಿವಮೊಗ್ಗ ಗಾಂಧಿ ಬಜಾರ್​ನಲ್ಲಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುಮತಿ

ಶಿವಮೊಗ್ಗದಲ್ಲಿ ಲಾಕ್​ಡೌನ್​ನಿಂದ ಜಿಲ್ಲೆಯ ವಾಣಿಜ್ಯ ಕೇಂದ್ರ ವ್ಯಾಪಾರ ವಹಿವಾಟು ಇಲ್ಲದೆ ತತ್ತರಿಸಿತ್ತು. ಹಾಗಾಗಿ ಇಲ್ಲಿನ ವ್ಯಾಪಾರಸ್ಥರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟಿದೆ.

ಗಾಂಧಿ ಬಜಾರ್
ಗಾಂಧಿ ಬಜಾರ್

ಶಿವಮೊಗ್ಗ: ಲಾಕ್​ಡೌನ್​ನಿಂದ ಜಿಲ್ಲೆಯ ವಾಣಿಜ್ಯ ಕೇಂದ್ರ ವ್ಯಾಪಾರ ವಹಿವಾಟು ಇಲ್ಲದೆ ತತ್ತರಿಸಿತ್ತು. ಹಾಗಾಗಿ ಇಲ್ಲಿನ ವ್ಯಾಪಾರಸ್ಥರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟಿದೆ.

ಈ ಮೊದಲು ಲಾಕ್​ಡೌನ್​ ನಡುವೆ ಕೆಲವು ಬಾರಿ ಮಾತ್ರ ಷರತ್ತುಬದ್ದ ಅನುಮತಿ ನೀಡಲಾಗಿತ್ತು. ಇದರಿಂದ ವ್ಯಾಪಾರಿಗಳಿಗೆ ಭಾರಿ ನಷ್ಟವಾಗಿತ್ತು. ಇದರಿಂದ ವ್ಯಾಪಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕಷ್ಟ ಹೇಳಿಕೊಂಡ ಕಾರಣ, ಜಿಲ್ಲಾಧಿಕಾರಿಗಳು ಗಾಂಧಿ ಬಜಾರ್​ ರಸ್ತೆಯ ಎಡ ಭಾಗದಲ್ಲಿ ಒಂದು ದಿನ ಹಾಗೂ ಬಲ ಭಾಗದಲ್ಲಿ ಒಂದು ದಿನ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದಾರೆ.

ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿನ ವ್ಯಾಪಾರಕ್ಕೆ ಅವಕಾಶ, ಪ್ರತ್ಯಕ್ಷ ವರದಿ

ದಿನಸಿ ಅಂಗಡಿಗಳ ಜೊತೆ, ಜವಳಿ, ಬಂಗಾರದ ಅಂಗಡಿ, ಮೊಬೈಲ್ ಸೇರಿದಂತೆ ಎಲ್ಲಾ ಅಂಗಡಿಗಳನ್ನು ತೆರೆಯಬಹುದಾಗಿದೆ.

ABOUT THE AUTHOR

...view details