ಕರ್ನಾಟಕ

karnataka

ETV Bharat / state

ಮೀಟರ್ ಅಳವಡಿಸದ ಮತ್ತು ಸೂಕ್ತ ದಾಖಲೆ ಇಲ್ಲದ 42 ಆಟೋಗಳಿಗೆ ದಂಡ ವಿಧಿಸಿದ ಸಂಚಾರಿ ಪೊಲೀಸರು - ಈಟಿವಿ ಭಾರತ್​ ಕನ್ನಡ ನ್ಯೂಸ್

ಶಿವಮೊಗ್ಗ ಸಂಚಾರಿ ಪೊಲೀಸರಿಂದ ನಗರದಲ್ಲಿ ಆಟೋಗಳ ತಪಾಸಣೆ ನಡೆಸಲಾಗಿದೆ.

ಆಟೋಗಳನ್ನುವಶಕ್ಕೆ ಪಡೆದ ಶಿವಮೊಗ್ಗ ಸಂಚಾರಿ ಪೊಲೀಸರು
ಆಟೋಗಳನ್ನು ವಶಕ್ಕೆ ಪಡೆದ ಶಿವಮೊಗ್ಗ ಸಂಚಾರಿ ಪೊಲೀಸರು

By

Published : May 24, 2023, 3:35 PM IST

Updated : May 24, 2023, 3:43 PM IST

ಶಿವಮೊಗ್ಗ : ಮೀಟರ್ ಅಳವಡಿಸದೆ, ಎಸ್​ಎಂಜಿ ನಂಬರ್ ಪಡೆಯದೇ ಹಾಗು ಸೂಕ್ತ ದಾಖಲೆ ಇಲ್ಲದೆ ನಗರದಲ್ಲಿ ಸಂಚಾರ ಮಾಡುತ್ತಿದ್ದ ಬರೋಬ್ಬರಿ 50 ಆಟೋಗಳನ್ನು ಶಿವಮೊಗ್ಗ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು, 42 ಆಟೋಗಳಿಗೆ ದಂಡ ವಿಧಿಸಿದ್ದಾರೆ. ಈ ಹಿಂದೆ ನಗರದಲ್ಲಿ ಹಲವಾರು ಆಟೋಗಳು ಜಿಲ್ಲಾ ಪೊಲೀಸರ‌ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ಸಂಚಾರ ನಡೆಸುತ್ತಿರುವ ಕುರಿತು‌ ಅನೇಕ ದೂರುಗಳು ಬಂದಿದ್ದವು.

ಇದನ್ನೂ ಓದಿ :ರೌಡಿ ಶೀಟರ್ ಸಂತೋಷ್​ ಮೃತ ದೇಹ ಮಾಗಡಿಯಲ್ಲಿ ಪತ್ತೆ.. ಪ್ರತಿಕಾರದ ಹತ್ಯೆ ಶಂಕೆ

ಹೀಗಾಗಿ ಇಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್​ಐ ಶೈಲಜಾ, ಸಿಪಿಐ ಜಯಶ್ರೀ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ದೊಡ್ಡಮನಿ ಅವರ ನೇತೃತ್ವದಲ್ಲಿ ನಗರದ ಬಿ. ಹೆಚ್. ರಸ್ತೆ ಸೇರಿದಂತೆ ಇತರೆ ಕಡೆ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 50 ಆಟೋಗಳನ್ನು ವಶಕ್ಕೆ ಪಡೆಯಲಾಗಿತ್ತು. ನಂತರ 8 ಆಟೋದ ಮಾಲೀಕರು ತಮ್ಮ ಸೂಕ್ತ ದಾಖಲೆಗಳನ್ನು ನೀಡಿದ ಹಿನ್ನೆಲೆ 8 ಆಟೋಗಳನ್ನು ಬಿಟ್ಟು ಕಳುಹಿಸಲಾಗಿದೆ. ಇನ್ನುಳಿದ 42 ಆಟೋಗಳಿಗೆ 21 ಸಾವಿರ ರೂ. ದಂಡ ವಿಧಿಸಲಾಗಿದೆ.

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ: ಕೊಲೆಗಾರನಿಗೆ ಜೀವಾವಧಿ ಶಿಕ್ಷೆ :ಸಹೋದರರ‌ ನಡುವೆ ಜಮೀನು ವಿವಾದದಿಂದ ಉಂಟಾದ ಗಲಾಟೆ 2018 ರಲ್ಲಿ ಕೊಲೆ ಮೂಲಕ ಅಂತ್ಯವಾಗಿತ್ತು. ಈ ಘಟನೆಯಲ್ಲಿ ಶಿವಮೊಗ್ಗ ನಗರದ ಶರಾವತಿ ಬಡಾವಣೆಯ ರೇವಣಪ್ಪ (51) ಎಂಬುವರಿಗೂ ಅವರ ಸಹೋದರರಾದ ಪ್ರಕಾಶ, ಮಂಜಪ್ಪ, ಶಂಕರಪ್ಪ, ಮೌನೇಶ್ವರಪ್ಪ ಹಾಗೂ ಆಶಾ ಹಾಗೂ ಇತರರು ಸೇರಿಕೊಂಡು ರೇವಣಪ್ಪ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಇದನ್ನೂ ಓದಿ :ಬಾರ್ಗರಿ ಧರ್ಮ ನಿಂದನೆ ಪ್ರಕರಣ: ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಆರೋಪಿ ಸಂದೀಪ್ ಬರೆಟ್ಟಾ ಬಂಧನ

ಬಳಿಕ ಮೃತ ರೇವಣಪ್ಪನವರ ಪತ್ನಿ, ಕಮಲಮ್ಮ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಲೋಕೇಶಪ್ಪನವರು ತನಿಖೆ ನಡೆಸಿ, ಹೊಳಲೂರು ಗ್ರಾಮದ ಪ್ರಕಾಶ(45) ರನ್ನು ವಶಕ್ಕೆ ಪಡೆದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣ ಸಂಬಂಧ ಜಿಲ್ಲಾ ಮತ್ತು ಸತ್ರನ್ಯಾಯಾಲಯ ವಾದ ವಿವಾದಗಳನ್ನು ಆಲಿಸಿತ್ತು. ನಂತರ ಆರೋಪಿ ಪ್ರಕಾಶನ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ಆಗದೆ ಹೋದಲ್ಲಿ 2 ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಸರ್ಕಾರ ಪರವಾಗಿ ಸುರೇಶ್ ಕುಮಾರ್ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ :ಶಿವಮೊಗ್ಗ: ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಬಾಲಕಿ ಸಾವು.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Last Updated : May 24, 2023, 3:43 PM IST

ABOUT THE AUTHOR

...view details