ಕರ್ನಾಟಕ

karnataka

ETV Bharat / state

ಮದುವೆಗೆ ಹುಡುಗಿ ಹುಡುಕಿ ಕೊಡಿ: ಶಿವಮೊಗ್ಗ ಎಸ್ಪಿಗೆ ಬಂತು ವಿಚಿತ್ರವಾದ ಪತ್ರ - Shimoga SP received a strange letter from a youth

ನನಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಹಾಗಾಗಿ ಹುಡುಗಿಯನ್ನು ಹುಡುಕಿ ಕೊಡಿ ಎಂದು ಶಿವಮೊಗ್ಗದ ಭದ್ರಾವತಿಯ ಯುವಕನೊಬ್ಬ ಎಸ್​ಪಿಗೆ ಪತ್ರವೊಂದನ್ನು ಬರೆದು ಮನವಿ ಮಾಡಿಕೊಂಡಿದ್ದಾನೆ.

ಮದುವೆಗೆ ಹುಡುಗಿ ಹುಡುಕಿ ಕೊಡಿ
ಮದುವೆ

By

Published : Nov 25, 2022, 8:37 PM IST

ಶಿವಮೊಗ್ಗ: ಮದುವೆ ಆಗಬೇಕೆಂಬ ಹಂಬಲದೊಂದಿಗೆ ಭದ್ರಾವತಿಯ ವ್ಯಕ್ತಿಯೋರ್ವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಪತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರವೀಣ್ ಎಂಬಾತ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾನೆ. ಪ್ರವೀಣ್ ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯ ನಿವಾಸಿ ಎಂದು ಆತನ ನೀಡಿರುವ ಮನವಿ ಪತ್ರದಲ್ಲಿದೆ. ಈತ ತೋಟಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಣ್ಣಸಂಗಪ್ಪ ಪುತ್ರನಾಗಿದ್ದಾನೆ.

ಈ ಹಿಂದೆ ಈತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ‌. ಸದ್ಯ ಪ್ರವೀಣ್ ರೈತಾಪಿ ಜೀವನ ನಡೆಸುತ್ತಿದ್ದಾನೆ. ವಿವಾಹವಾಗಲು ವಧು ಹುಡುಕಿ ಕೊಡುವಂತೆ ತನ್ನ ಮನವಿಯಲ್ಲಿ ವಿನಂತಿಸಿಕೊಂಡಿದ್ದಾನೆ. ಪ್ರವೀಣ್ ವಿಚಿತ್ರ ದೂರನ್ನು ಪೊಲೀಸ್ ಇಲಾಖೆ ಸ್ವೀಕರಿಸಿರುವುದು ಆಶ್ವರ್ಯ ತಂದಿದೆ.

ಇದನ್ನೂ ಓದಿ:'ಅನ್ನದಾತನಿಗೆ ಕನ್ಯೆ ಸಿಗದು, ರೈತನ ಮಕ್ಕಳು ರೈತರಾಗಬಾರದೇ?': ತಹಶೀಲ್ದಾರ್‌ ಮೊರೆ ಹೋದ ಯುವ ರೈತರು

ABOUT THE AUTHOR

...view details