ಶಿವಮೊಗ್ಗ:ಕೆಲಸದ ಒತ್ತಡ ತಾಳಲಾರದೆ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸಾಗರ: ನೇಣು ಬಿಗಿದುಕೊಂಡು ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ - ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಜೋಗ ಎಸ್ಬಿಐ ಶಾಖೆಯ ಮ್ಯಾನೇಜರ್ ಕೆಲಸದ ಒತ್ತಡ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
SBI ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಕೊಂಡು ಆತ್ಮಹತ್ಯೆ
ಸಾಗರ ತಾಲೂಕು ಜೋಗ ಎಸ್ಬಿಐ ಶಾಖೆಯ ಮ್ಯಾನೇಜರ್ ಅನಿಲ್ ಕುಮಾರ್(35) ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಬ್ಯಾಂಕ್ನ ಬಾಗಿಲು ತೆರೆದು ಮನೆಗೆ ಹೋಗಿ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮನೆಯಿಂದ ಹೆಂಡತಿಯನ್ನು ಹೊರಗೆ ಕಳುಹಿಸಿದ್ದರಂತೆ.
ಕೆಲ ದಿನಗಳ ಕಾಲ ರಜೆ ಹಾಕಿದ್ದ ಅನಿಲ್ ನಿನ್ನೆ ಬ್ಯಾಂಕ್ಗೆ ಆಗಮಿಸಿದ್ದರು. ಬ್ಯಾಂಕ್ನಲ್ಲಿನ ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಜೋಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.