ಕರ್ನಾಟಕ

karnataka

ETV Bharat / state

ಸಾಗರ: ನೇಣು ಬಿಗಿದುಕೊಂಡು ಎಸ್​ಬಿಐ ಬ್ಯಾಂಕ್​​​​ ಮ್ಯಾನೇಜರ್​​ ಆತ್ಮಹತ್ಯೆ - ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಜೋಗ ಎಸ್​ಬಿಐ‌‌ ಶಾಖೆಯ ಮ್ಯಾನೇಜರ್ ಕೆಲಸದ ಒತ್ತಡ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

SBI ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಕೊಂಡು ಆತ್ಮಹತ್ಯೆ

By

Published : Oct 20, 2019, 10:55 AM IST

ಶಿವಮೊಗ್ಗ:ಕೆಲಸದ ಒತ್ತಡ ತಾಳಲಾರದೆ ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸಾಗರ ತಾಲೂಕು ಜೋಗ ಎಸ್​ಬಿಐ‌‌ ಶಾಖೆಯ ಮ್ಯಾನೇಜರ್ ಅನಿಲ್ ಕುಮಾರ್(35) ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಬ್ಯಾಂಕ್​ನ ಬಾಗಿಲು ತೆರೆದು ಮನೆಗೆ ಹೋಗಿ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮನೆಯಿಂದ ಹೆಂಡತಿಯನ್ನು ಹೊರಗೆ ಕಳುಹಿಸಿದ್ದರಂತೆ.

ಕೆಲ ದಿನಗಳ ಕಾಲ‌ ರಜೆ ಹಾಕಿದ್ದ ಅನಿಲ್ ನಿನ್ನೆ ಬ್ಯಾಂಕ್​​ಗೆ ಆಗಮಿಸಿದ್ದರು. ಬ್ಯಾಂಕ್​​ನಲ್ಲಿನ ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಜೋಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ABOUT THE AUTHOR

...view details