ಕರ್ನಾಟಕ

karnataka

ETV Bharat / state

ಪೊಲೀಸರ ವಶದಲ್ಲಿದ್ದ ಅತ್ಯಾಚಾರ ಆರೋಪಿ ಪರಾರಿ: ಪಿಎಸ್​ಐ‌, ಮುಖ್ಯ ಪೇದೆ ಅಮಾನತು!

ಅತ್ಯಾಚಾರ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಪರಿಣಾಮ ಪಿಎಸ್​ಐ ಹಾಗೂ ಮುಖ್ಯ ಪೇದೆಯನ್ನು ಎಸ್ಪಿ ಅಮಾನತು ಮಾಡಿದ್ದಾರೆ.

By

Published : Feb 27, 2020, 10:40 AM IST

PSI and head constable suspended, PSI and head constable suspended for rape accused escape, PSI and head constable suspended news, ಪಿಎಸ್​ಐ‌ ಮತ್ತು ಮುಖ್ಯ ಪೇದೆ ಅಮಾನತು, ಅತ್ಯಾಚಾರ ಆರೋಪಿ ಪರಾರಿಯಾದ ಹಿನ್ನೆಲೆ ಪಿಎಸ್​ಐ‌ ಮತ್ತು ಮುಖ್ಯ ಪೇದೆ ಅಮಾನತು, ಪಿಎಸ್​ಐ‌ ಮತ್ತು ಮುಖ್ಯ ಪೇದೆ ಅಮಾನತು ಸುದ್ದಿ,
ಸಂಗ್ರಹ ಚಿತ್ರ

ಶಿವಮೊಗ್ಗ:ಅತ್ಯಾಚಾರ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಪರಿಣಾಮ ಪಿಎಸ್​ಐ ಹಾಗೂ ಮುಖ್ಯ ಪೇದೆಯನ್ನು ಎಸ್ಪಿ ಅಮಾನತು ಮಾಡಿದ್ದಾರೆ.

ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸುರೇಶ್ ಎಂಬುವನನ್ನು ಬಂಧಿಸಿದ್ದರು. ಆರೋಪಿ‌ ಸುರೇಶ್ ನನ್ನು ಪೊಲೀಸರು ಆರೋಗ್ಯ ತಪಾಸಣೆಗೆಂದು ಕರೆದು‌ಕೊಂಡು ಹೋಗುವಾಗ ಆತ ಪರಾರಿಯಾಗಿದ್ದಾನೆ.‌ ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ‌ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ‌ ಶಾಂತರಾಜ್​ ಮಾಳೂರು, ಪೊಲೀಸ್ ಠಾಣೆಯ ಪಿಎಸ್​ಐ ಅಶ್ವಿನ್‌ ಕುಮಾರ್ ಹಾಗೂ ಮುಖ್ಯ ಪೇದೆ ಪ್ರಸನ್ನ ಕುಮಾರ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details