ಶಿವಮೊಗ್ಗ:ಶಿವಮೊಗ್ಗ ವಾರ್ಡ್ ನಂ.3 ಮತ್ತು 4 ರ ನಡುವೆ ಇರುವ ಶಾಂತಿನಗರ ಮುಖ್ಯ ರಸ್ತೆಯನ್ನು ದುರಸ್ಥಿ ಮಾಡಬೇಕೆಂದು ಆಗ್ರಹಿಸಿ, ಪಾಲಿಕೆ ಸದಸ್ಯ ಯೋಗೀಶ್ ಹಸುವಿಗೆ ಸ್ನಾನ ಮಾಡಿಸಿ, ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಪೋರೇಟರ್ ಯೋಗೀಶ್ ಇಂದು ಶಾಂತನಗರ ಮುಖ್ಯ ರಸ್ತೆಯನ್ನು ರಿಪೇರಿ ಮಾಡಿಸಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲು ಆಗದ ಪರಿಸ್ಥಿತಿ ಬಂದಿದೆ. ದ್ವಿಚಕ್ರ ವಾಹನ ಸವಾರರು ಬೀಳುವಂತಹ ಸ್ಥಿತಿ ಬಂದಿದೆ. ರಸ್ತೆ ಕೆಸರು ಗದ್ದೆಯಂತಾಗಿದೆ. ಒಂದು ರೀತಿ ದನದ ಕೊಟ್ಟಿಗೆಯಂತೆ ಆಗಿದೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ರಸ್ತೆಯಲ್ಲಿಯೇ ಹಸುವಿಗೆ ಸ್ನಾನ ಮಾಡಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.