ಕರ್ನಾಟಕ

karnataka

By

Published : Oct 6, 2020, 9:53 AM IST

ETV Bharat / state

ಶಿವಮೊಗ್ಗ: ಹಥ್ರಾಸ್ ಘಟನೆ ಖಂಡಿಸಿ ಡಿಎಸ್​​ಎಸ್​ ಪ್ರತಿಭಟನೆ

ಅತ್ಯಾಚಾರ ಎಸಗಿದ ಕ್ರೂರಿಗಳಿಗೆ ಗಲ್ಲಿಗೇರಿಸಬೇಕು ಹಾಗೂ ದಲಿತರಿಗೆ ರಕ್ಷಣೆ ನೀಡದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

Protest in Shimoga condemning the Hathras incident
ಹಥ್ರಾಸ್ ಅತ್ಯಾಚಾರ ಪ್ರಕರಣ ಖಂಡಿಸಿ ಡಿಎಸ್​​ಎಸ್​ ಪ್ರತಿಭಟನೆ

ಶಿವಮೊಗ್ಗ: ಉತ್ತರಪ್ರದೇಶದ ಹಥ್ರಾಸ್​​ನಲ್ಲಿ​​ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹಥ್ರಾಸ್ ಅತ್ಯಾಚಾರ ಪ್ರಕರಣ ಖಂಡಿಸಿ ಡಿಎಸ್​​ಎಸ್​ ಪ್ರತಿಭಟನೆ

ಅತ್ಯಾಚಾರ ಎಸಗಿದ ಕ್ರೂರಿಗಳಿಗೆ ಗಲ್ಲಿಗೇರಿಸಬೇಕು ಹಾಗೂ ದಲಿತರಿಗೆ ರಕ್ಷಣೆ ನೀಡದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಯುವತಿಯ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ABOUT THE AUTHOR

...view details