ಕರ್ನಾಟಕ

karnataka

ETV Bharat / state

ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಸಿ ಟಿ ರವಿ ವಿರುದ್ಧ ಪ್ರತಿಭಟನೆ - ರಜಪೂತರು ಮೊಘಲರ ಜೊತೆ ಇದ್ದರು

ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು 'ಇದು ತಮ್ಮ ಕೆಲಸ ಅಲ್ಲ' ಎಂದು ಸುಮ್ಮನೆ ಕುಳಿತಿದ್ದರು. ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಸಿ ಟಿ ರವಿ ಹೇಳಿಕೆ ನೀಡಿದ್ದರು.

Protest against CT Ravi in Shiovamogga
ಸಿ ಟಿ ರವಿ ವಿರುದ್ಧ ಪ್ರತಿಭಟನೆ

By

Published : Oct 17, 2022, 7:22 PM IST

Updated : Oct 17, 2022, 7:31 PM IST

ಶಿವಮೊಗ್ಗ: ರಜಪೂತರ ವಿರುದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಜಿಲ್ಲಾ ರಜಪೂತ ಸಮಾಜ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರಜಪೂತ ಸಮಾಜದವರು ಸಿ ಟಿ ರವಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಸಿ ಟಿ ರವಿ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ದೇಶದ ಇತಿಹಾಸವನ್ನು ಕೆಣಕಿ ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು 'ಇದು ತಮ್ಮ ಕೆಲಸ ಅಲ್ಲ' ಎಂದು ಸುಮ್ಮನೆ ಕುಳಿತಿದ್ದರು. ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಹೇಳಿ ರಜಪೂತ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸಿ ಟಿ ರವಿಯವರು ಚರಿತ್ರೆ ಹಾಗೂ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡದೇ, ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದೇ ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತಾಡಿ ಸಮಾಜದ ಗೌರವವಕ್ಕೆ ಧಕ್ಕೆ ತಂದಿರುತ್ತಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಿ.ಟಿ. ರವಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಸಿ ಟಿ ರವಿ ವಿರುದ್ಧ ಪ್ರತಿಭಟನೆ

ಪ್ರತಿಭಟನೆಯಲ್ಲಿ ಜಿಲ್ಲಾ ರಜಪೂತ್ ಸಭಾದ ಅಧ್ಯಕ್ಷ ಆರ್ ದೀಪಕ್‌ ಸಿಂಗ್, ಎಸ್ ಎಂ ವಿಶ್ವನಾಥ್‌ ಸಿಂಗ್, ಎಸ್ ಡಿ ಅನಂತರಾಮ್ ಸಿಂಗ್, ರವೀಂದ್ರಸಿಂಗ್, ರಾಜೇಂದ್ರ ಸಿಂಗ್, ಆರ್ ಹೆಚ್ ಸತ್ಯನಾರಾಯಣ ಸಿಂಗ್, ಕೆ ನರಸಿಂಗ್, ಆರ್ ಪಿ ಭರತ್‌ರಾಜ್‌ ಸಿಂಗ್, ರಘುವೀರ್‌ ಸಿಂಗ್, ಬಿ ವಿಜಯ್‌ ಸಿಂಗ್, ಎಲ್ ನರೇಂದ್ರ ಸಿಂಗ್, ವಿ ಸೋಹನ್‌ ಸಿಂಗ್, ರೂಪ್‌ ಕುಮಾರ್‌ ಸಿಂಗ್, ಎಂ.ಗುರುರಾಜ್‌ ಸಿಂಗ್, ಹರಿನಾಥ್‌ ಸಿಂಗ್, ಉದಯ್‌ ಸಿಂಗ್, ಶಂಕರ್‌ ಸಿಂಗ್ ಇನ್ನಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಹಿಡಿದ ಜನ..‌ ರಸ್ತೆ ಅವ್ಯವಸ್ಥೆ ವಿರುದ್ಧ ಕಿಡಿ

Last Updated : Oct 17, 2022, 7:31 PM IST

ABOUT THE AUTHOR

...view details