ಶಿವಮೊಗ್ಗ: ಸಂಘ ಸಂಸ್ಥೆಗಳಲ್ಲಿ ಪಡೆದಿರುವ ಸಾಲ ಮರುಪಾವತಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ; ಸಾಲ ಮರುಪಾವತಿಗೆ ಕಾಲಾವಕಾಶ ಕೋರಿ ಜಿಲ್ಲಾಧಿಕಾರಿಗೆ ಮನವಿ - prajaseva samithi
ಫೈನಾನ್ಸ್ ಹಾಗೂ ಸಂಘ ಸಂಸ್ಥೆಗಳಲ್ಲಿ ಪಡೆದಿರುವ ಸಾಲಕ್ಕೆ ಮಾರ್ಚ್ ವರೆಗೂ ಬಡ್ಡಿ ಮರುಪಾವತಿಸಿದ್ದೇವೆ. ಆದರೆ ಲಾಕ್ಡೌನ್ ಜಾರಿಯ ಪರಿಣಾಮವಾಗಿ ದುಡಿಮೆ ಇಲ್ಲದೇ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಜಿಲ್ಲಾಧ್ಯಕ್ಷ ವಿ. ಅಶೋಕ್ ಕುಮಾರ್ ತಿಳಿಸಿದರು.
![ಶಿವಮೊಗ್ಗ; ಸಾಲ ಮರುಪಾವತಿಗೆ ಕಾಲಾವಕಾಶ ಕೋರಿ ಜಿಲ್ಲಾಧಿಕಾರಿಗೆ ಮನವಿ prajaseva samithi appeal to dc in shimoga](https://etvbharatimages.akamaized.net/etvbharat/prod-images/768-512-7653344-934-7653344-1592403067917.jpg)
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪ್ರಜಾ ಸೇವಾ ಸಮಿತಿ
ನಗರದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ವಿ ಅಶೋಕ್ ಕುಮಾರ್, ಫೈನಾನ್ಸ್ ಹಾಗೂ ಸಂಘ ಸಂಸ್ಥೆಗಳಲ್ಲಿ ಪಡೆದಿರುವ ಸಾಲಕ್ಕೆ ಮಾರ್ಚ್ ವರೆಗೂ ಬಡ್ಡಿ ಮರುಪಾವತಿಸಿದ್ದೇವೆ. ಆದರೆ ಲಾಕ್ಡೌನ್ ಜಾರಿಯ ಪರಿಣಾಮವಾಗಿ ದುಡಿಮೆ ಇಲ್ಲದೇ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದರು.
ವಿ ಅಶೋಕ್ ಕುಮಾರ್
ಅನೇಕ ಸಂಘ ಸಂಸ್ಥೆಗಳು, ಫೈನಾನ್ಸ್ಗಳು ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿವೆ. ಹಾಗಾಗಿ ಸಾಲ ಮತ್ತು ಬಡ್ಡಿ ಮರುಪಾವತಿಗೆ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.