ಕರ್ನಾಟಕ

karnataka

ಕ್ಷುಲ್ಲಕ ಕಾರಣಕ್ಕೆ ರಾತ್ರೋರಾತ್ರಿ ಸಾಯಲು ಹೊರಟಿದ್ದ ಯುವತಿ... ಪೊಲೀಸರಿಂದ ರಕ್ಷಣೆ

By

Published : Aug 9, 2020, 11:36 AM IST

ಹೊಳೆ ಹಾರಲು ಹೋದ ಯುವತಿಯನ್ನು ಪೊಲೀಸರು ರಕ್ಷಿಸಿ ಮನೆಗೆ ಕಳುಹಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Shimoga
Shimoga

ಶಿವಮೊಗ್ಗ:ತಂದೆ-ತಾಯಿ ಜೊತೆ ಜಗಳವಾಡಿ ಮನೆ ಬಿಟ್ಟು ಹೊಳೆ ಹಾರಲು ಹೋದ ಯುವತಿಯ ಮನವೊಲಿಸಿ ಪೊಲೀಸರು ಮನೆಗೆ ತಲುಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಹನುಮಂತ ನಗರದ 24 ವರ್ಷದ ಯುವತಿ ಮನೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮನೆ ಬಿಟ್ಟು ಸಾಯುವುದಾಗಿ ಹೇಳಿ ಮನೆಯಿಂದ ರಾತ್ರಿ 1 ಗಂಟೆಗೆ ಹೊರ ಬಂದಿದ್ದಳು.

ಈ ಕುರಿತಂತೆ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣ ಪೊಲೀಸರು ಹುಡುಕಾಟ ನಡೆಸಿದಾಗ ಯುವತಿ ಹೊಳೆ ಬಳಿ ಕೋಟೆ ಪೊಲೀಸರಿಗೆ ಸಿಕ್ಕಿದ್ದಾಳೆ. ನಂತರ ಯುವತಿಯನ್ನು ಜಯನಗರ ಪೊಲೀಸ್ ಠಾಣೆಗೆ ಕರೆಯಿಸಿ ಪೋಷಕರ ಜೊತೆ ಕಳುಹಿಸಿದ್ದಾರೆ.

ABOUT THE AUTHOR

...view details