ಕರ್ನಾಟಕ

karnataka

By

Published : Apr 26, 2021, 5:25 PM IST

Updated : Apr 26, 2021, 5:44 PM IST

ETV Bharat / state

14 ದಿನ ಕೋವಿಡ್​ ಕರ್ಫ್ಯೂ: ತರಕಾರಿ, ದಿನಸಿ ಖರೀದಿಗೆ ಮುಗಿಬಿದ್ದ ಜನ

ರಾಜ್ಯಾದ್ಯಂತ ನಾಳೆ ಸಂಜೆಯಿಂದ 14 ದಿನಗಳ ಕಾಲ ರಾಜ್ಯ ಸರ್ಕಾರ ಕೋವಿಡ್​ ಕರ್ಫ್ಯೂ ವಿಧಿಸಿದ ಹಿನ್ನೆಲೆ ಇಂದೇ ಶಿವಮೊಗ್ಗದ ಜನರು ತರಕಾರಿ ಹಾಗೂ ಸಾಮಗ್ರಿಗಳನ್ನು ಕೊಂಡೊಯ್ಯಲು ಮಾರುಕಟ್ಟೆಗೆ ಅಪಾರ ಸಂಖ್ಯೆಯಲ್ಲಿ ಧಾವಿಸಿದ್ದಾರೆ.

market
market

ಶಿವಮೊಗ್ಗ:ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ನಾಳೆಯಿಂದ 14 ದಿನ ಮತ್ತೆ ಕೊರೊನಾ ಕರ್ಫ್ಯೂ ವಿಧಿಸಿದ ಕಾರಣ ಶಿವಮೊಗ್ಗ ನಗರದ ಜನರು ತರಕಾರಿ ಹಾಗೂ ದಿನಸಿ ಖರೀದಿಗೆ ಮುಗಿಬಿದ್ದಿದ್ದಾರೆ.

ತರಕಾರಿ, ದಿನಸಿ ಖರೀದಿಗೆ ಮುಗಿಬಿದ್ದ ಜನ

ನಗರದ ವ್ಯಾಪಾರ ಕೇಂದ್ರ ವಾಗಿರುವ ಗಾಂಧಿ ಬಜಾರ್​​ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದೆ. ಆದರೆ, ತರಕಾರಿ ಮಾರುಕಟ್ಟೆ ಸೇರಿದಂತೆ ದಿನಸಿ ಅಂಗಡಿಗಳ ಮುಂದೆ ಜನರು ಯಾವುದೇ ಸಾಮಾಜಿಕ ಅಂತರ ಇಲ್ಲದೇ ಖರೀದಿಗೆ ಮುಂದಾಗಿದ್ದಾರೆ.

Last Updated : Apr 26, 2021, 5:44 PM IST

ABOUT THE AUTHOR

...view details