ಕರ್ನಾಟಕ

karnataka

ETV Bharat / state

ಮಗಳ ಮದುವೆಗೆಂದು ತೀರ್ಥಹಳ್ಳಿಗೆ ಬಂದ ಪೋಷಕರಿಗೆ ಬೀಗರ ಮನೆಯಲ್ಲಿಯೇ ಕ್ವಾರಂಟೈನ್!

ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸಿ ಪೋಷಕರ ಅನುಮತಿಯನ್ನೂ ಪಡೆದಿದ್ದ ವಧು-ವರನಿಗೆ ತೀರ್ಥಹಳ್ಳಿಯಲ್ಲಿ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಆದ್ರೆ ಮಗಳ ಮದುವೆಗೆಂದು ಬಂದ ಪೋಷಕರು ಇದೀಗ ಬೀಗರ ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗಿದ್ದಾರೆ.

By

Published : Apr 21, 2020, 2:44 PM IST

Parents who came to the daughter's wedding
ಮಗಳ ಮದುವೆಗೆಂದು ಬಂದ ಪೋಷಕರು

ಶಿವಮೊಗ್ಗ: ಮಗಳ ಮದುವೆಗೆ ಬಂದ ಪೋಷಕರು ಬೀಗರ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಸಂತೋಷ್ ಹಾಸನದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಐಶ್ವರ್ಯ ಜೊತೆ ಲವ್ ಆಗಿದೆ. ಇಬರಿಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಶಿವರಾಜಪುರ ಗ್ರಾಮದ ಸಾಲುಮರದ ಗಣಪತಿ ದೇವಾಲಯದಲ್ಲಿ ಮದುವೆ ನಿಗದಿಯೂ ಆಗಿತ್ತು.

ಆದರೆ ಹಾಸನದಿಂದ ವಿವಿಧ ಚೆಕ್​ಪೋಸ್ಟ್​​ಗಳನ್ನ ದಾಟಿ ಬರುವಷ್ಟರಲ್ಲಿ ಮದುವೆ ಮೂಹೂರ್ತ ಮುಗಿದು ಹೋಗಿತ್ತು. ಹೀಗಾಗಿ ಮದುವೆ ಮಾಡಲು ಬಂದಿದ್ದ ಪುರೋಹಿತರು ವಾಪಸ್ ಹೋಗಿದ್ದಾರೆ.

ವಧು-ವರರಿಗೆ ಮನೆಯಲ್ಲಿಯೇ ಮದುವೆ ಮಾಡಿಸಲಾಗಿದೆ. ಈ ವಿಷಯ ತಿಳಿದು ಬಂದ ಪೊಲೀಸರು ಐಶ್ವರ್ಯ ಪೋಷಕರಿಗೆ ಲಾಕ್​ಡೌನ್​​ ಮುಗಿಯುವ ತನಕ ಇಲ್ಲೇ ಇರಬೇಕು ಎಂದು ಹೇಳಿದ್ದಾರೆ. ಪರಿಣಾಮ ಬೀಗರು ಹೋಂ ಕ್ವಾರಂಟೈನ್​​ನಲ್ಲಿಯೇ ಉಳಿದಿದ್ದಾರೆ.

ABOUT THE AUTHOR

...view details