ಕರ್ನಾಟಕ

karnataka

By

Published : Sep 11, 2019, 5:25 AM IST

Updated : Sep 11, 2019, 6:28 PM IST

ETV Bharat / state

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕ

ಭದ್ರಾ ನದಿಯಲ್ಲಿ ಒಂದು ದಡದಿಂದ ಇನ್ನೂಂದು ದಡಕ್ಕೆ ತೆಪ್ಪದಲ್ಲಿ ಆಟ ಆಡುತ್ತಿದ್ದ ಮೂವರಲ್ಲಿ ಓರ್ವ ನೀರುಪಾಲಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಹುಟ್ಟಡಗಿ ಹೋದ ಯುವಕ

ಶಿವಮೊಗ್ಗ: ಭದ್ರಾ ನದಿಯಲ್ಲಿ ಒಂದು ದಡದಿಂದ ಇನ್ನೂಂದು ದಡಕ್ಕೆ ತೆಪ್ಪದಲ್ಲಿ ಆಟ ಆಡುತ್ತಿದ್ದ ಮೂವರಲ್ಲಿ ಓರ್ವ ನೀರುಪಾಲಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಗರಸಭೆ ಮುಂಭಾಗ ಬಳಿಯ ಭದ್ರಾ ನದಿಯಲ್ಲಿ ತಮಿಮ್, ಜಬಿ ಹಾಗೂ ಅಜರ್ ಎಂಬ ಯುವಕರು ತೆಪ್ಪದಲ್ಲಿ ಆಟ ಆಡುತ್ತಾ ಆಚೆಯಿಂದ ಈಚೆ, ಈಚೆಯಿಂದ ಆಚೆ ಸಾಗುವಾಗ ತೆಪ್ಪದ ಹುಟ್ಟು ನೀರಿನಲ್ಲಿ ಬಿದ್ದಿದೆ. ಅದನ್ನು ತೆಗೆಯಲು ಹೋಗಿ ಮೂವರು ನೀರಿನಲ್ಲಿ ಬಿದ್ದಿದ್ದಾರೆ.

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕ

ಇದರಲ್ಲಿ ಜಬಿ ಎಂಬ ಯುವಕ ಈಜಿ‌ ದಡ ಸೇರಿದ್ದಾನೆ. ಅಜರ್ ನದಿ ಮಧ್ಯದ ಮರವನ್ನು ಹಿಡಿದು ಕುಳಿತು ಕೊಂಡಿದ್ದಾನೆ. ಈತನನ್ನು‌ ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ತಮಿಮ್(22) ನೀರಿನಲ್ಲಿ ತೇಲಿ ಕೊಂಡು ಹೋಗಿದ್ದಾನೆ. ಆತನಿಗಾಗಾಗಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 11, 2019, 6:28 PM IST

ABOUT THE AUTHOR

...view details