ಕರ್ನಾಟಕ

karnataka

ETV Bharat / state

ಒಡಿಶಾದ ಖ್ಯಾತ ಕವಿಗೆ ಒಲಿದ ಕುವೆಂಪು ರಾಷ್ಟ್ರೀಯ ಪುರಸ್ಕಾರ - ಡಾ.ರಾಜೇಂದ್ರ ಕಿಶೋರ್ ಮಾಹಿತಿ

ಡಾ.ರಾಜೇಂದ್ರ ಕಿಶೋರ್ ಪಂಡಾರವರಿಗೆ ಕೇಂದ್ರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಅಂತರ್ಜಾಲ ಪತ್ರಿಕಾ ಸಂಪಾದಕರೂ ಆಗಿರುವ ಇವರಿಗೆ ಸಂಬಲ್​ಪುರ್​​ ವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ.

odia-poet-dr-rajendra-kishore-panda-has-been-selected-for-the-kuvempu-rashtriya-puraskar
ಒಡಿಶಾದ ಖ್ಯಾತ ಕವಿಗೆ ಒಲಿದ ಕುವೆಂಪು ರಾಷ್ಟ್ರೀಯ ಪುರಸ್ಕಾರ

By

Published : Jul 1, 2021, 2:46 AM IST

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾ‌ನ ನೀಡುವ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಒಡಿಶಾದ ಖ್ಯಾತ ಕವಿ ಡಾ.ರಾಜೇಂದ್ರ ಕಿಶೋರ್ ಪಂಡಾರವರಿಗೆ ಒಲಿದಿದೆ. ಆಧುನಿಕ ಒರಿಯಾ ಸಾಹಿತ್ಯದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ಡಾ.ರಾಜೇಂದ್ರ ಕಿಶೋರ್ ರವರು 16 ಕವನ ಸಂಕಲನಗಳನ್ನು ಒಂದು ಕಾದಂಬರಿ ಹಾಗೂ ಅಂತರ್ಜಾಲ ಸಂಪಾದನಾ ಕಾವ್ಯ ಸಂಚಯ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಡಾ.ರಾಜೇಂದ್ರ ಕಿಶೋರ್ ಪಂಡಾರವರಿಗೆ ಕೇಂದ್ರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಅಂತರ್ಜಾಲ ಪತ್ರಿಕಾ ಸಂಪಾದಕರೂ ಆಗಿರುವ ಇವರಿಗೆ ಸಂಬಲ್​ಪುರ್​​ ವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ. ಈಗ ಪಂಡಾರವರಿಗೆ 2020ರ ಸಾಲಿನ ಪ್ರಶಸ್ತಿ ನೀಡಲಾಗುವುದು.

ಇನ್ನು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ.ಎಚ್.ಎಸ್.ಶಿವಪ್ರಕಾಶ್,‌ ಅಗ್ರಹಾರ ಕೃಷ್ಣಮೂರ್ತಿ ಹಾಗೂ ಬಂಗಾಳಿ ಸಾಹಿತಿ ಶಾಮಲ ಭಟ್ಟಾಚಾರ್ಯ ಇದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ಹಂಪ ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಡಾ.ರಾಜೇಂದ್ರ ಪಂಡಾ ಹೆಸರನ್ನು ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ‌..!

ಕುವೆಂಪುರವರ ಜನ್ಮದಿನದ ಡಿಸಂಬರ್ 29ರಂದು ಕುಪ್ಪಳಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಗೋಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details