ಕರ್ನಾಟಕ

karnataka

By

Published : Dec 7, 2022, 9:33 PM IST

Updated : Dec 7, 2022, 10:38 PM IST

ETV Bharat / state

ಕೊನೆಗೂ ಎಚ್ಚೆತ್ತ ನೀರಾವರಿ ಇಲಾಖೆ: ಸೋರುತ್ತಿದ್ದ ಶತಮಾನದ‌ ಕಟ್ಟಡಕ್ಕೆ ಪುನರುಜ್ಜೀವ

ನೀರಾವರಿ ಇಲಾಖೆಯ ಸರ್ವೆ ಕಾರ್ಯ ನಡೆಸುವ ಕಚೇರಿಯು ಕನಿಷ್ಠ ಸೌಲಭ್ಯದಿಂದ ವಂಚಿತವಾಗಿ ಹಳೆಯ ಕಡತಗಳು ನಾಶವಾಗುತ್ತಿವೆ ಎಂಬ ಭಯದಲ್ಲಿದ್ದ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ ಎಂದು ಕಛೇರಿಯ ಕಾರ್ಯಪಾಲಕಿ ಚೈತ್ರಾ ತಿಳಿಸಿದರು.

life to leaky century old building
ಮಾಧ್ಯಮ ವರದಿಯ ನಂತರ ಎಚ್ಚೆತ್ತ ನೀರಾವರಿ ಇಲಾಖೆ: ಸೋರುತ್ತಿದ್ದ ಶತಮಾನದ‌ ಕಟ್ಟಡಕ್ಕೆ ಪುರ್ನಜೀವ.

ಶಿವಮೊಗ್ಗ:ನಗರದ ಪುರಾತನ ಕಟ್ಟಡಗಳಲ್ಲಿ ಒಂದಾದ ನೀರಾವರಿ ಇಲಾಖೆಯ ಕಟ್ಟಡದ ರಿಪೇರಿ ಕಾರ್ಯ ಆರಂಭವಾಗಿದೆ. 1855ರಲ್ಲಿ ನಿರ್ಮಾಣವಾದ ಈ ಕಟ್ಟಡವು ಸರಿಯಾದ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಸೋರುತ್ತಿತ್ತು. ಇದೀಗ ಇಲಾಖೆ ರಿಪೇರಿ ಕಾರ್ಯಕ್ಕೆ ಹಣ ಮಂಜೂರು ಮಾಡಿದೆ.

ಮಳೆಗಾಲದಲ್ಲಿ ಮಳೆ‌ ನೀರು ಕಚೇರಿಯೊಳಗೆ ಬರುತ್ತಿತ್ತು. ಇದರಿಂದ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಮೇಲಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ನೀರಾವರಿ ಇಲಾಖೆಯ ಸರ್ವೆ ಕಾರ್ಯ ನಡೆಸುವ ಕಚೇರಿಯು ಕನಿಷ್ಠ ಸೌಲಭ್ಯದಿಂದ ವಂಚಿತವಾಗಿ ಹಳೆಯ ಕಡತಗಳು ನಾಶವಾಗುತ್ತಿವೆ ಎಂಬ ಭಯದಲ್ಲಿದ್ದ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ ಎಂದು ಕಛೇರಿಯ ಕಾರ್ಯಪಾಲಕಿ ಚೈತ್ರಾ ತಿಳಿಸಿದರು.

ಕೊನೆಗೂ ಎಚ್ಚೆತ್ತ ನೀರಾವರಿ ಇಲಾಖೆ: ಸೋರುತ್ತಿದ್ದ ಶತಮಾನದ‌ ಕಟ್ಟಡಕ್ಕೆ ಪುನರುಜ್ಜೀವ

10 ಲಕ್ಷ ರೂ.ಯಲ್ಲಿ ಕಟ್ಟಡ ರಿಪೇರಿ: ನೀರಾವರಿ ಇಲಾಖೆಯ ಉಪ ವಿಭಾಗದ ಕಚೇರಿ ರಿಪೇರಿಗೆ 10 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿಯೇ ಗುತ್ತಿಗೆದಾರರು ಕಚೇರಿಯ ಮೇಲ್ಛಾವಣಿ ತೆಗೆದು ಕೆಲಸ ಪ್ರಾರಂಭಿಸಿದ್ದಾರೆ. ಮೇಲ್ಛಾವಣಿಗೆ ಹಾಕುವ ಮರ ಸೇರಿದಂತೆ ಬಿರುಕು ಬಿಟ್ಟ ಗೋಡೆ, ನೆಲವನ್ನು ಮುಚ್ಚುವ ಕೆಲಸ ನಡೆಯಲಿದೆ. ಸುಮಾರು 1 ತಿಂಗಳ ಕಾಲ ಕಟ್ಟಡದ ರಿಪೇರಿ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಶಿವಮೊಗ್ಗ: ಮಹಾನಗರ ಪಾಲಿಕೆ ಮುತ್ತಿಗೆ ಹಾಕಿದ ಕಾಂಗ್ರೆಸ್ ​ಪಾಲಿಕೆ ಸದಸ್ಯರು

Last Updated : Dec 7, 2022, 10:38 PM IST

ABOUT THE AUTHOR

...view details