ಕರ್ನಾಟಕ

karnataka

ರೈತರ ಮುಖವಾಡ ತೊಟ್ಟು ಪ್ರತಿಪಕ್ಷದವರಿಂದ ಪ್ರತಿಭಟನೆ: ಬಿ.ವೈ.ರಾಘವೇಂದ್ರ

By

Published : Dec 8, 2020, 12:48 PM IST

ಕಾಂಗ್ರೆಸ್​​ನವರು 70 ವರ್ಷಗಳ ಕಾಲ ಮಾಡಿದ ಪಾಪದ ಕೆಲಸವನ್ನು ಕೇಂದ್ರ ಸರ್ಕಾರ ತೊಳೆಯುವ ಕೆಲಸ ಮಾಡುತ್ತಿದೆ. ಈಗ ರಾಜಕೀಯವಾಗಿ ಏನೂ ಮಾಡಲಾಗದ ಪ್ರತಿಪಕ್ಷಗಳು ರೈತರನ್ನು ತಪ್ಪು ದಾರಿಗೆಳೆದು, ರೈತ ಮುಖವಾಡ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದರು.

ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಸಂಸದ ಬಿ.ವೈ. ರಾಘವೇಂದ್ರ
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ದೇಶಾದ್ಯಂತ ಪ್ರತಿಪಕ್ಷಗಳು ಸೋತಿದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ರೈತರ ಮುಖವಾಡ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು.

ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಸಂಸದ ಬಿ.ವೈ. ರಾಘವೇಂದ್ರ

ಕಾಂಗ್ರೆಸ್​​ನವರು ಕಳೆದ 70 ವರ್ಷಗಳ ಕಾಲ ಮಾಡಿದ ಪಾಪದ ಕೆಲಸವನ್ನು ತೊಳೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈಗ ರಾಜಕೀಯವಾಗಿ ಏನೂ ಮಾಡಲಾಗದ ಪ್ರತಿಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆದು, ರೈತ ಮುಖವಾಡ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಓದಿ:ಐಪಿಎಸ್ ಅಧಿಕಾರಿ ಭೀಮಾಶಂಕರ್​​​ ತೆರಳುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ

ಕೇಂದ್ರ ಸರ್ಕಾರ ದೇಶದ ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಈ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ ಇವುಗಳ ವಿರುದ್ಧ ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರುಗಳು ರಾಜಕೀಯ ದುರುದ್ದೇಶದೊಂದಿಗೆ ರೈತ ಮುಖವಾಡ ಧರಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನಿಜವಾದ ರೈತರು ಭಾಗಿಯಾಗಿಲ್ಲ ಎಂದರು.

TAGGED:

ABOUT THE AUTHOR

...view details