ಕರ್ನಾಟಕ

karnataka

By

Published : Jan 26, 2022, 10:55 PM IST

ETV Bharat / state

ಪದ್ಮಶ್ರೀ ಪುರಸ್ಕೃತ ಗಮಕ ಗಾಯಕ ಕೇಶವಮೂರ್ತಿಯವರಿಗೆ ಅಭಿನಂದಿಸಿದ ಸಚಿವ ನಾರಾಯಣಗೌಡ

ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಖ್ಯಾತ ಗಮಕ ಗಾಯಕ ಎಚ್.ಆರ್.ಕೇಶವಮೂರ್ತಿಯವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಮನೆಗೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರು ಅಭಿನಂದಿಸಿ ಗೌರವಿಸಿದರು.

Minister Narayana Gowda congratulates Padma Shri award Gamaka singer Keshavamurthy
ಪದ್ಮಶ್ರೀ ಪುರಸ್ಕೃತ ಗಮಕ ಗಾಯಕ ಕೇಶವಮೂರ್ತಿಯವರಿಗೆ ಅಭಿನಂದಿಸಿದ ಸಚಿವ ನಾರಾಯಣಗೌಡ

ಶಿವಮೊಗ್ಗ: ಖ್ಯಾತ ಗಮಕ ಗಾಯಕ ಎಚ್.ಆರ್.ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಲಭಿಸಿದ್ದು, ಇಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಸನ್ಮಾನಿಸಿ, ಗೌರವಿಸಿದರು.

ಪದ್ಮಶ್ರೀ ಪುರಸ್ಕೃತ ಗಮಕ ಗಾಯಕ ಕೇಶವಮೂರ್ತಿಯವರಿಗೆ ಅಭಿನಂದಿಸಿದ ಸಚಿವ ನಾರಾಯಣಗೌಡ

ತಾಲೂಕಿನ ಹೊಸಹಳ್ಳಿಯಲ್ಲಿರುವ ಕೇಶವಮೂರ್ತಿ ಅವರ ನಿವಾಸಕ್ಕೆ ಖುದ್ದು ಸಚಿವರು ಭೇಟಿ ನೀಡಿ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದಕ್ಕೆ ಗೌರವಿಸಿ, ಅಭಿನಂದನೆ ಸಲ್ಲಿಸಿದರು. ಈ ವೇಳೆ ಗಮಕ ಗಂಧರ್ವ ಎಂಬ ಹೆಸರು ಪಡೆದಿರುವ ಕೇಶವಮೂರ್ತಿ ಅವರು, ಇಳಿವಯಸ್ಸಿನಲ್ಲೂ ಗಮಕ ರಾಗ ಹಾಡುವ ಮೂಲಕ ಗಮನ ಸೆಳೆದರು.

ಸರ್ಕಾರ ಈ ಕಲೆಗೆ ಪ್ರೋತ್ಸಾಹ ನೀಡಬೇಕು. 60 ವರ್ಷಗಳಿಂದ ನಾನು ಗಮಕ ಗಾಯನ ನಡೆಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಇದನ್ನು ತಲುಪಿಸಲು ಬೆಂಬಲ ಬೇಕು ಎಂದು ಕೇಶವಮೂರ್ತಿ ಅವರು ಮನವಿ ಮಾಡಿದರು.

ಇದನ್ನೂ ಓದಿ:ರಾಜ್ಯದಲ್ಲಿಂದು 48,905 ಮಂದಿಗೆ ಕೋವಿಡ್ ಸೋಂಕು; 39 ಸೋಂಕಿತರು ಬಲಿ

ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಡಿ ಎಸ್ ಅರುಣ್, ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details