ಕರ್ನಾಟಕ

karnataka

ಕುಟುಂಬಸ್ಥರ ನಡುವೆ ಜಮೀನು ವಿವಾದ : ಕೋರ್ಟ್​ ಮೆಟ್ಟಿಲೇರಿದ್ದಾತನ ಕಗ್ಗೊಲೆ

By

Published : Jul 10, 2021, 7:03 PM IST

ಕುಟುಂಬಸ್ಥರ ನಡುವಿನ ಜಮೀನು ವಿವಾದ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದ ಹಿನ್ನೆಲೆ ಮಾವನ ಕಡೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ..

man-killed-in-land-dispute-between-family-member
ಕೋರ್ಟ್​ ಮೆಟ್ಟಿಲೇರಿದ್ದಾತನ ಕಗ್ಗೊಲೆ

ಶಿವಮೊಗ್ಗ :ಜಮೀನು ವಿವಾದ ಸಂಬಂಧ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೊಳೆಹೊನ್ನೂರು ಸಮೀಪದ ತಿಮ್ಮಾಪುರ ಗ್ರಾಮದ ನಿವಾಸಿ ಶಿವಲಿಂಗಪ್ಪ(45) ಕೊಲೆಯಾದ ದುರ್ದೈವಿ. ತಿಮ್ಮಾಪುರ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧ ಪಟ್ಟಂತೆ ಶಿವಲಿಂಗಪ್ಪ ಅವರ ಮಾವ ಹಾಗೂ ಹೊನ್ನಪ್ಪ ಅವರಿಗೆ 1 ಎಕರೆ ಜಮೀನು ಸಂಬಂಧ ವಿವಾದವಿತ್ತು.

ಕೋರ್ಟ್​ ಮೆಟ್ಟಿಲೇರಿದ್ದಾತನ ಕಗ್ಗೊಲೆ

ಈ ವಿವಾದ ಪ್ರಕರಣ ಕೋರ್ಟ್​​ನಲ್ಲಿದ್ದು, ಭೂಮಿಯನ್ನ ಕೊಲೆಯಾದ ಶಿವಲಿಂಗಪ್ಪರ ಮಾವ ಹೊನ್ನಪ್ಪ ಉಳುಮೆ ಮಾಡುತ್ತಿದ್ದರು. ಆದರೆ, ಶಿವಲಿಂಗಪ್ಪ ಕೋರ್ಟ್​​ನಿಂದ ಇದಕ್ಕೆ ತಡೆಯಾಜ್ಞೆ ತಂದಿದ್ದರು.

ಇಂದು ಜಮೀನಿಗೆ ಬಂದ ಸಂದರ್ಭ ಹೊನ್ನಪ್ಪನ ಕಡೆಯವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ:ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ : ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

ABOUT THE AUTHOR

...view details