ಕರ್ನಾಟಕ

karnataka

ETV Bharat / state

ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗಕ್ಕೆ ಬಂದಾಗ ಟವೆಲ್​ ನೀಡಿ ಸ್ವಾಗತಿಸೋಣ

ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನ ಸ್ವೀಕರಿಸುತ್ತಿದ್ದಂತೆ ನೆರೆ ಪೀಡಿತ ಜಿಲ್ಲೆಗಳಿಗೆ ರೌಂಡ್ಸ್ ಹೋಗಿದ್ದು, ಇನ್ನು ತಮ್ಮ ತವರು ಕ್ಷೇತ್ರಕ್ಕೆ ಬಂದಿಲ್ಲ. ಸಚಿವರಾದ ನಂತರ, ಆಗಸ್ಟ್ 25ರ ಭಾನುವಾರದಂದು, ಪ್ರಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಶಿವಮೊಗ್ಗ ನಗರ ಬಿಜೆಪಿ ಅವರ ಸ್ವಾಗತಕ್ಕೆ ಡಿಫ್ರೆಂಟಾಗಿ ಪ್ಲಾನ್ ಮಾಡಿಕೊಂಡಿದ್ದಾರೆ.

By

Published : Aug 22, 2019, 10:24 PM IST

ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗಕ್ಕೆ ಬಂದಾಗ ಟವೆಲ್​ ನೀಡಿ ಸ್ವಾಗತಿಸೋಣ

ಶಿವಮೊಗ್ಗ:ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗಕ್ಕೆ ಬಂದಾಗ ಅವರಿಗೆ ಯಾರು ಕೂಡ ಹಾರ ಹಾಕಬೇಡಿ ಬದಲಾಗಿ ಟವೆಲ್​ ನೀಡಿ ಸ್ವಾಗತಿಸಿ ಎಂದು ಶಿವಮೊಗ್ಗ ನಗರ ಬಿಜೆಪಿ ತಮ್ಮ ಕಾರ್ಯಕರ್ತರಿಗೆ, ಸಂಘ-ಸಂಸ್ಥೆ ಪದಾಧಿಕಾರಿಗಳಿಗೆ, ಸಾರ್ವಜನಿಕರಿಗೆ ಕರೆ ನೀಡಿದೆ.

ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗಕ್ಕೆ ಬಂದಾಗ ಟವೆಲ್​ ನೀಡಿ ಸ್ವಾಗತಿಸೋಣ

ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಸಚಿವರಾಗಿದ್ದಾರೆ. ಸಚಿವ ಸ್ಥಾನ ಸ್ವೀಕರಿಸುತ್ತಿದ್ದಂತೆ ನೆರೆ ಪೀಡಿತ ಜಿಲ್ಲೆಗಳಿಗೆ ರೌಂಡ್ಸ್ ಹೋಗಿದ್ದು, ಇನ್ನು ತಮ್ಮ ತವರು ಕ್ಷೇತ್ರಕ್ಕೆ ಬಂದಿಲ್ಲ. ಸಚಿವರಾದ ನಂತರ, ಆಗಸ್ಟ್ 25 ರ ಭಾನುವಾರದಂದು, ಪ್ರಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಶಿವಮೊಗ್ಗ ನಗರ ಬಿಜೆಪಿ ಅವರ ಸ್ವಾಗತಕ್ಕೆ ಡಿಫ್ರೆಂಟಾಗಿ ಪ್ಲಾನ್ ಮಾಡಿಕೊಂಡಿದ್ದಾರೆ.

ಕೆ.ಎಸ್. ಈಶ್ವರಪ್ಪರಿಗೆ ಯಾರು ಕೂಡ ಹಾರ, ತುರಾಯಿ, ಹೂವಿನ ಬೊಕ್ಕೆಗಳು, ಶಾಲ್ ಗಳು ಕೊಡುಗೆಗಳನ್ನು ನೀಡುವ ಮೂಲಕ ಸನ್ಮಾನಿಸದೇ ಅಥವಾ ಸ್ವಾಗತ ಕೋರದೇ, ಟವೆಲ್ ಗಳನ್ನ ನೀಡುವ ಮೂಲಕ ಬರಮಾಡಿಕೊಳ್ಳಿ ಎಂದು ಕರೆ ನೀಡಲಾಗಿದೆ. ಈಗಾಗಲೇ, ನೆರೆಯಿಂದಾಗಿ, ಸಾವಿರಾರು ಜನರು ಸಂತ್ರಸ್ತರಾಗಿದ್ದು, ಅವರಿಗೆ, ಟವೆಲ್ ನೀಡೋಣ. ಸಂತ್ರಸ್ತ ಕುಟುಂಬದಲ್ಲಿ 5-6 ಜನರಿರುತ್ತಾರೆ, ಅವರಿಗೆ ಈ ಟವೆಲ್ ಉಪಯೋಗಕ್ಕೆ ಬರಲಿದೆ. ಹೀಗಾಗಿ ಡಿಫ್ರೆಂಟ್ ಪ್ಲಾನ್ ಮಾಡಿಕೊಂಡಿರುವ ಶಿವಮೊಗ್ಗ ನಗರ ಬಿಜೆಪಿ ಮುಖಂಡರು, ಅಂದು ಈಶ್ವರಪ್ಪರಿಗೆ ಈ ರೀತಿ ಸ್ವಾಗತ ಕೋರುವಂತೆ, ಕರೆ ನೀಡಿದ್ದಾರೆ.

ABOUT THE AUTHOR

...view details