ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಆರಂಭವಾಯ್ತು ಕೆಎಸ್​ಆರ್​​ಟಿಸಿ ಬಸ್​ ಸಂಚಾರ - ಜಿಲ್ಲೆಯಲ್ಲಿ ಪ್ರಾರಂಭವಾದ ಕೆಎಸ್ಆರ್​ಟಿಎಸ್ ಸಂಚಾರ

ಒಂದು ಬಸ್​ಗೆ ಗರಿಷ್ಠ 30 ಜನ ಪ್ರಯಾಣಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗ ಬಸ್ ಪ್ರಯಾಣ ಮಾಡಿದಂತೆ, ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ಬಸ್​ಗಳು ಪ್ರಯಾಣ ಮಾಡುತ್ತಿವೆ.

ksrtc-bus-service-started-in-the-shivmogga-district
ಜಿಲ್ಲೆಯಲ್ಲಿ ಪ್ರಾರಂಭವಾದ ಕೆಎಸ್ಆರ್​ಟಿಎಸ್ ಸಂಚಾರ

By

Published : May 4, 2020, 2:08 PM IST

Updated : May 4, 2020, 3:22 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 40 ದಿನಗಳ ನಂತರ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಸ್ ಸಂಚಾರ ಬೆಳಗ್ಗೆಯಿಂದ ಪ್ರಾರಂಭವಾಗಿವೆ.

ಬಸ್​ನ್ನು ಆಯಾ ತಾಲೂಕಿನ ಪ್ರಯಾಣಿಕರ ಸಂಖ್ಯೆಯ ಮೇರೆಗೆ ಪ್ರಾರಂಭ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸ್ಯಾನಿಟೈಸರ್​ನಿಂದ ಕೈ ಸ್ವಚ್ಛಗೊಳಿಸಿ ಬಸ್ ನಿಲ್ದಾಣದ ಒಳಗೆ ಬಿಡುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಾರಂಭವಾದ ಕೆಎಸ್ಆರ್​ಟಿಸಿ ಸಂಚಾರ

ಒಂದು ಬಸ್​ಗೆ ಗರಿಷ್ಠ 30 ಜನ ಪ್ರಯಾಣಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗ ಬಸ್ ಪ್ರಯಾಣ ಮಾಡಿದಂತೆ, ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ಬಸ್​ಗಳು ಪ್ರಯಾಣ ಮಾಡುತ್ತಿವೆ. ಬಸ್ ಸಂಚಾರದಿಂದ ನಷ್ಟವಾದರೂ ಸರ್ಕಾರದ ಆದೇಶದ ಮೇರೆಗೆ ಬಸ್ ಬಿಡಲಾಗುತ್ತಿದೆ ಎಂದು ಶಿವಮೊಗ್ಗ ಕೆಎಸ್​ಆರ್​ಟಿ.ಎಸ್​ನ ಜಿಲ್ಲಾ ಕಂಟ್ರೋಲರ್ ನವೀನ್ ತಿಳಿಸಿದ್ದಾರೆ.

Last Updated : May 4, 2020, 3:22 PM IST

ABOUT THE AUTHOR

...view details