ಕರ್ನಾಟಕ

karnataka

By

Published : Sep 18, 2019, 4:07 AM IST

ETV Bharat / state

ಹತ್ತನೇ ತರಗತಿಯಲ್ಲಿ ಫೇಲ್ ಆದಾಗ ಅಮ್ಮ ಕಪಾಳಕ್ಕೆ ಬಾರಿಸಿದ್ದರು: ಕೆ.ಎಸ್​.ಈಶ್ವರಪ್ಪ

ನಾನು ಎಸ್​ಎಸ್​ಎಲ್​ಸಿ ಫೇಲ್ ಆದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು. ಅಮ್ಮನ ಬುದ್ಧಿವಾದದಿಂದ ಮತ್ತೆ ಶಾಲೆಗೆ ತೆರಳಿದ್ದೆ. ಆ ಘಟನೆ ನನ್ನ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎಂದು ಸಚಿವ ಈಶ್ವರಪ್ಪ ಹಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪರನ್ನು ತಡೆದ ವಿದ್ಯಾರ್ಥಿಗಳು

ಶಿವಮೊಗ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪನವರಿಗೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ನಾನು ಎಸ್​ಎಸ್​ಎಲ್​ಸಿ ಫೇಲ್ ಆದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು. ಅಮ್ಮನ ಬುದ್ಧಿವಾದದಿಂದ ಮತ್ತೆ ಶಾಲೆಗೆ ತೆರಳಿದ್ದೆ. ಆ ಘಟನೆ ನನ್ನ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎಂದು ಸಚಿವ ಈಶ್ವರಪ್ಪ ಹಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪರನ್ನು ತಡೆದ ವಿದ್ಯಾರ್ಥಿಗಳು

ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವರಿಗೆ ಎದುರಾದ ಹಾಸ್ಟೆಲ್​ ವಿದ್ಯಾರ್ಥಿಗಳು, ಹಾಸ್ಟೆಲ್ ಸ್ಥಳಾಂತರ ಬಗ್ಗೆ ವಿವರಣೆ ಕೇಳಿದ್ದಾರೆ.

ಪ್ರಸ್ತುತ ಇದ್ದ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದ್ದು, ಈ ಕಾರಣದಿಂದ ಅಧಿಕಾರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಎಲ್ಲ ವಿದ್ಯಾರ್ಥಿಗಳು ಸಹಕರಿಸುವಂತೆ ಸಚಿವ ಕೆ.ಎಸ್​.ಈಶ್ವರಪ್ಪ ಕೇಳಿಕೊಂಡಿದ್ದಾರೆ.

ಪೋಷಕರು ನಂಬಿಕೆ ಇರಿಸಿ ಹಾಸ್ಟೆಲ್​ನಲ್ಲಿ ಬಿಟ್ಟಿದ್ದು ಹೀಗಾಗಿ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಕೆಲ ದಿನಗಳವರೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವಂತೆ ಹೇಳಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಈಶ್ವರಪ್ಪ ನೀಡಿದ್ದಾರೆ.

ABOUT THE AUTHOR

...view details