ಕರ್ನಾಟಕ

karnataka

ನಮ್ಮ ತಂದೆ ಸುಳ್ಳು‌ ಪ್ರಕರಣದಿಂದ ಮುಕ್ತವಾಗಿರುವುದು ಸಂತಸ ತಂದಿದೆ: ಕೆ.ಈ ಕಾಂತೇಶ್

By

Published : Jul 20, 2022, 8:51 PM IST

ನಮ್ಮ ತಂದೆಯವರ ಮೇಲೆ ಹೊರಿಸಲಾದ ಸುಳ್ಳು ಪ್ರಕರಣದಿಂದ ಅವರು ಮುಕ್ತವಾಗಿರುವುದು ತುಂಬಾ ಖುಷಿತಂದಿದೆ ಎಂದು ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯವರು ಈಶ್ವರಪ್ಪನವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು.

k-e-kantesh-said-he-is-happy-for-his-father-is-free-from-the-false-case
ನಮ್ಮ ತಂದೆ ಸುಳ್ಳು‌ ಪ್ರಕರಣದಿಂದ ಮುಕ್ತರಾಗಿರುವುದು ಸಂತೋಷ ತಂದಿದೆ: ಕೆ.ಈ ಕಾಂತೇಶ್

ಶಿವಮೊಗ್ಗ: ನಮ್ಮ ತಂದೆ ಸುಳ್ಳು ಪ್ರಕರಣದಿಂದ ಮುಕ್ತರಾಗಿರುವುದು ನಮ್ಮ‌ ಕುಟುಂಬಕ್ಕೆ ಸಂತಸ ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಸಂತಸ ವ್ಯಕ್ತಪಡಿಸಿದ್ದಾರೆ.‌ ನಮ್ಮ ತಂದೆ 1989 ರಿಂದ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ನಡೆಸಿದ್ದಾರೆ. ಈಗ ಇಂತಹ ಸುಳ್ಳು ಆರೋಪ ಬಂದಾಗ ಒಂದು ರೀತಿ‌ ಬೇಸರವಾಗಿತ್ತು. ಈಗ ಆರೋಪದಿಂದ ಹೊರ ಬಂದಿರುವುದು ನಮಗೆಲ್ಲ ಸಂತಸ ತಂದಿದೆ ಹೇಳಿದರು.

ನಮ್ಮ ತಂದೆ ಸುಳ್ಳು‌ ಪ್ರಕರಣದಿಂದ ಮುಕ್ತರಾಗಿರುವುದು ಸಂತೋಷ ತಂದಿದೆ: ಕೆ.ಈ ಕಾಂತೇಶ್

ಸಂತೋಷ್ ಪಾಟೀಲ ಅವರಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಈಗ ನಮ್ಮ ತಂದೆ ಆರೋಪದಿಂದ ಮುಕ್ತರಾಗಿ ಬಂದಿದ್ದಾರೆ. ಮತ್ತೆ ನಮ್ಮ ತಂದೆ ಮಂತ್ರಿ ಆಗುವುದು ಬಿಜೆಪಿಯ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರುಗಳು ಹಾಗೂ ಆರ್ ಎಸ್ ಎಸ್ ನ ಪ್ರಮುಖರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಈಶ್ವರಪ್ಪ ಪ್ರಕರಣದಲ್ಲಿ ಬಿ ರಿಪೋರ್ಟ್​ ಹಾಕಿದ್ದಾರೆ‌ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಅನೇಕ ಸ್ವಾಮೀಜಿಗಳು ಕರೆ ಮಾಡಿ ಈಶ್ವರಪ್ಪಗೆ ಅಭಿನಂದನೆ ಸಲ್ಲಿಸಿದರು. ಇನ್ನೂ ಅವರು ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಈಶ್ವರಪ್ಪ ಪುತ್ರ ಕಾಂತೇಶ್ ಅವರು ತಮ್ಮ ತಂದೆಗೆ ಸಿಹಿ ತಿನ್ನಿಸಿದರು. ಈ ವೇಳೆ ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ, ಸೊಸೆ ಶಾಲಿನಿ, ಮೊಮ್ಮಕ್ಕಳು ಸಿಹಿ ತಿನ್ನಿಸಿ ಸಂಭ್ರಮಪಟ್ಟರು. ಜೊತೆಗೆ ಪಕ್ಷದ ಮುಖಂಡರು,‌ಕಾರ್ಯಕರ್ತರು ಸಿಹಿ ತಿನಿಸಿ ಸಂತಸ ವ್ಯಕ್ತಪಡಿಸಿದರು.

ಓದಿ :ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್​ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ

For All Latest Updates

TAGGED:

ABOUT THE AUTHOR

...view details