ಶಿವಮೊಗ್ಗ:ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿವಮೊಗ್ಗ ನಗರ ಶಾಸಕರಾದ ಕೆ.ಎಸ್. ಈಶ್ವರಪ್ಪ ಇಂದು ಅಮೀರ್ ಅಹ್ಮದ್ ಕಾಲೋನಿಯ ಸ್ಲಂ ನಿವಾಸಿಗಳಿಗೆ ಪರಿಚಯ ಪತ್ರವನ್ನು ವಿತರಿಸಿದರು.
ಶಿವಮೊಗ್ಗ ರೈಲ್ವೆ ನಿಲ್ದಾಣ ಪಕ್ಕದ ಅಮೀರ್ ಅಹ್ಮದ್ ಕಾಲೋನಿಯು ಬಸವನಗುಡಿ ವಾರ್ಡ್ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ. ಇಲ್ಲಿನ ನಿವಾಸಿಗಳು ತಮಗೆ ಹಕ್ಕುಪತ್ರ ನೀಡಬೇಕೆಂದು ಸಾಕಷ್ಟು ಹೋರಾಟ ನಡೆಸಿದ್ದು, ಅದರ ಫಲವಾಗಿ ಈಗ ಸರ್ಕಾರ ಪರಿಚಯ ಪತ್ರವನ್ನು ನೀಡಿದೆ.