ಕರ್ನಾಟಕ

karnataka

ETV Bharat / state

ದೀಪಾವಳಿ ವಿಶೇಷತೆ ಏನು? ಹಬ್ಬವನ್ನು ಹೇಗೆ ಆಚರಿಸಬೇಕು?: ಉಪಯುಕ್ತ ಮಾಹಿತಿ - ​ ETV Bharat Karnataka

ದೀಪಾವಳಿ ಹಬ್ಬದ ವಿಶೇಷತೆಗಳು, ಆಚರಣೆಯ ಬಗ್ಗೆ ಶಿವಮೊಗ್ಗದ ಸಂತೋಷ ಭಾರದ್ವಾಜ ಗುರೂಜಿ ಮಾಹಿತಿ ನೀಡಿದ್ದಾರೆ.

ಸಂತೋಷ ಭಾರದ್ವಾಜ ಗುರೂಜಿ
ಸಂತೋಷ ಭಾರದ್ವಾಜ ಗುರೂಜಿ

By ETV Bharat Karnataka Team

Published : Nov 10, 2023, 1:56 PM IST

ದೀಪಾವಳಿ ಆಚರಣೆಯ ವಿಶೇಷತೆಯ ಕುರಿತು ಮಾಹಿತಿ

ಶಿವಮೊಗ್ಗ:ಭಾರತೀಯ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ. ವರ್ಷದ ಕೊನೆಯಲ್ಲಿ ಆಚರಿಸುವ ಈ ಹಬ್ಬದ ವಿಶೇಷತೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಅಂಶಗಳು ಮತ್ತು ಆಚರಣೆಯ ವಿಧಾನವನ್ನು ಸಂತೋಷ ಭಾರದ್ವಾಜ ಗುರೂಜಿ ತಿಳಿಸಿದ್ದಾರೆ.

ದೀಪಾವಳಿ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ. ಶನಿವಾರ ತ್ರಯೋದಶಿ ಇದೆ. ಇದಕ್ಕೆ ಧನ ತ್ರಯೋದಶಿ ಎಂದೂ ಕರೆಯುವರು. ಧನ ತ್ರಯೋದಶಿಯಲ್ಲಿ ಬಂಗಾರ ಖರೀದಿ ಮಾಡಿ ಮನೆಗೆ ತರುವಂತಹದ್ದು ಶಾಸ್ತ್ರದಲ್ಲಿದೆ. ನಂತರ ಶನಿವಾರವೇ ಚರ್ತುದಶಿ ಚಂದ್ರೋದಯ ಸಂಜೆ 4:50ಕ್ಕೆ ಇರುವುದರಿಂದ ಚರ್ತುದಶಿಯಂದು ಅಭ್ಯಂಗ ಸ್ಥಾನ ಮಾಡಬೇಕು. ಲಕ್ಷ್ಮೀ ಪೂಜೆಯನ್ನು ಭಾನುವಾರ ಸಂಜೆ 4 ಗಂಟೆಯಿಂದ 7:30ರೊಳಗೆ ಮಾಡಬೇಕು. ಅಶ್ವಿಜ ಅಮಾವಾಸ್ಯೆ ಪ್ರದೋಶಕ ಕಾಲದಲ್ಲಿ ಲಕ್ಷ್ಮೀ ಆರಾಧನೆನ್ನು ಕಾಲವನ್ನು ಮಾಡಬೇಕು. ಸಂಜೆ ಸೂರ್ಯ ಮುಳುಗುವುದನ್ನು ಪ್ರದೋಶಕ ಕಾಲ ಎಂದು ಕರೆಯುತ್ತೇವೆ.

ಸೋಮವಾರ ಮಧ್ಯಾಹ್ನ 3 ಗಂಟೆಯತನಕ ಅಮಾವಾಸ್ಯೆ ಇರುತ್ತದೆ. ಬಲಿ ಪಾಡ್ಯಮಿಯನ್ನು ಮಂಗಳವಾರ ಮಾಡುವಂಥದ್ದು. ನಂತರ ಬಲೀಂದ್ರ ಪೂಜೆ ಮಾಡಬೇಕು. ವಿಶೇಷವಾಗಿ ಬಲಿ ಚಕ್ರವರ್ತಿ ಅಂದು ಭೂಮಿಗೆ ಬಂದು ಸಂಚಾರ ಮಾಡುತ್ತಾನೆ ಎಂಬ ನಂಬಿಕೆ ಇದೆ. ವಿಷ್ಣುದೇವ ವಾಮನ ರೂಪದಲ್ಲಿ ಬಂದು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳತ್ತಾನೆ. ಸುತಳದಲ್ಲಿ ಇರುವ ರಾಕ್ಷಸರು, ಪ್ರೇತಗಳು ಯಾರಿಗೂ ತೊಂದರೆ ಕೊಡದಂತೆ ಆಳುತ್ತಿರುವುದು ಬಲಿ ಚಕ್ರವರ್ತಿ. ಇದರಿಂದ ಬೆಳಿಗ್ಗೆ ಗೋ ಪೂಜೆ ಮಾಡಿ ಸಂಜೆ ಬಲಿ ಚಕ್ರವರ್ತಿಯನ್ನು ಪೂಜಿಸುತ್ತಾರೆ. ಶನಿವಾರವೇ ನೀರು ತುಂಬುವ ಹಬ್ಬವನ್ನು ಮಾಡಬೇಕು. ಆದೇ ನೀರಿನಿಂದ ನರಕ ಚರ್ತುದಶಿಯಂದು ಅಭ್ಯಂಗ ಸ್ಥಾನ ಮಾಡಬೇಕು.

ದೀಪಾವಳಿಯಂದು ಎಲ್ಲರೂ ಎಣ್ಣೆ ದೀಪವನ್ನೇ ಹಚ್ಚಬೇಕು. ಕ್ಯಾಂಡಲ್ ದೀಪ ಹಚ್ಚಬಾರದು. ನಮ್ಮ ಸಂಪ್ರದಾಯದಲ್ಲಿ ಕ್ಯಾಂಡಲ್ ಹಚ್ಚುವ ಪದ್ದತಿ ಇಲ್ಲ. ಮಣ್ಣಿನ ದೀಪವನ್ನು ಹರಣೆಳ್ಳೆಯಿಂದ ಹಚ್ಚದೇ ಎಳ್ಳೆಣ್ಣೆಯಿಂದಲೂ ಹಚ್ಚಬೇಕು. ಕಾರ್ತಿಕ ಮಾಸದಲ್ಲಿ, ನಾಳೆ ಆರಂಭವಾಗುವ ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆಯತನಕ ಪ್ರತಿನಿತ್ಯ ಸಂಜೆ ದೀಪವನ್ನು ಹಚ್ಚಿಡಬೇಕು.

ಹಿಂದೆ ನಮ್ಮ ಪೂರ್ವಿಕರು ಪ್ರತಿನಿತ್ಯ ದೀಪ ಹಚ್ಚಿಡುತ್ತಿದ್ದರು. ನಿತ್ಯ ದೀಪವನ್ನು ಹಚ್ಚಿದರೆ ಲಕ್ಷ್ಮಿ ಕೃಪಾ ಕಟಾಕ್ಷ ಉಂಟಾಗುತ್ತದೆ. ಇದರಿಂದ ಮನೆಗೆ ಪಾಸಿಟಿವ್ ಎನರ್ಜಿ ಬರುತ್ತದೆ ಎಂಬ ನಂಬಿಕೆ ಇದೆ. ಗೋವಿನಲ್ಲಿ ಮುಕ್ಕೋಟಿ ದೇವರಿರುತ್ತಾರೆ ಎಂಬ ಕಾರಣಕ್ಕೆ ಗೋ ಪೂಜೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಹಬ್ಬಗಳ ಸೀಸನ್‌: ರಾಜ್ಯವಾರು ಬ್ಯಾಂಕ್‌ ರಜಾ ದಿನಗಳ ಮಾಹಿತಿ

ABOUT THE AUTHOR

...view details